ಬಿಜೆಪಿ ಒನ್ ಮ್ಯಾನ್ ಶೋ, ಟೂ ಮ್ಯಾನ್ ಆರ್ಮಿ: ಶತೃಘ್ನ ಸಿನ್ಹಾ ಲೇವಡಿ

ನಾನು ಬಿಜೆಪಿಗಿಂತಲೂ ಭಾರತೀಯ ಜನತೆಗೆ ಸೇರಿದವನಾಗಿದ್ದೇನೆ' ಎಂದು ಅತೃಪ್ತ ಬಿಜೆಪಿ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ...
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ
ಪಾಟ್ನಾ: ನಾನು ಬಿಜೆಪಿಗಿಂತಲೂ ಭಾರತೀಯ ಜನತೆಗೆ ಸೇರಿದವನಾಗಿದ್ದೇನೆ' ಎಂದು ಅತೃಪ್ತ ಬಿಜೆಪಿ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದಾರೆ. 
"ಭಾರತೀಯ ಜನತಾ ಪಕ್ಷ ಈಗ ಒನ್‌ ಮ್ಯಾನ್‌ ಶೋ, ಟೂ ಮೆನ್‌ ಆರ್ಮಿ' ಎಂಬಂತಾಗಿದೆ ಎಂದು ಶತ್ರುಘ್ನ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್‌ ಶಾ ಅವರನ್ನು ಲೇವಡಿ ಮಾಡಿದ್ದಾರೆ.
ಪಾಟ್ನಾದ ಸಾಹಿಬ್‌ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ, "ನಾನು ಯಾವುದೇ ಪಕ್ಷಕ್ಕೆ ನಿಷ್ಠನಾಗಿರುವ ಮೊದಲು ಭಾರತೀಯ ಜನತೆಗೆ ನಿಷ್ಠನಾಗಿದ್ದೇನೆ' ಎಂದು  ಹೇಳಿದ್ದಾರೆ.
ಕೇಂದ್ರದಲ್ಲಿ ಆಡಳಿತದಲ್ಲಿರುವ  ಸರ್ಕಾರದ ಮೂರು ಮಂತ್ರಿಗಳ ಹೆಸರನ್ನು ಕೇಳಲು ಪ್ರಯತ್ನಿಸಿ, ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ, ನಂತರ ಅಮಿತ್ ಶಾ ಹೆಸರು ಹೇಳುತ್ತಾರೆ, ಆದರೆ ಅವರು ಮಂತ್ರಿಗಳಲ್ಲ ,ಇಡೀ ದೇಶ ನೋಟು ಅಮಾನ್ಯೀಕರಣದಿಂದಾಗಿ ಬಳಲಿದೆ. ಜನ ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ, ಇದರ ಬೆನ್ನಲ್ಲೇ ಜಿಎಸ್ ಟಿ ಎಂಬ ಹೊಸ ಅಸ್ತ್ರ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com