ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಮಹಾರಾಷ್ಟ್ರದ ವಾರ್ಧಾ ಬಳಿಯಿರುವ ಸೇವಾಗ್ರಾಮದ ಆಶ್ರಮದಲ್ಲಿ ಪ್ರಾರ್ಥನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಆಗಮಿಸಿದ್ದರು. ಪ್ರಾರ್ಥನಾ ಸಭೆಯ ಬಳಿಕ ಭೋಜನ ಮಾಡಿದ ಇಬ್ಬರೂ ನಾಯಕರು ಸ್ವತಃ ತಮ್ಮ ತಟ್ಟೆ ತೊಳೆಯುವುದರ ಮೂಲಕ ಗಾಂಧಿ ಜಯಂತಿಯ ದಿನವಾದರೂ ತಮ್ಮ ಸರಳತೆಯನ್ನು ಪ್ರದರ್ಶಿಸಿದ್ದಾರೆ.