ಬಡವರ ಹಸಿವು ನೀಗಿಸಲು ರಾಹುಲ್ ಗಾಂಧಿ ಹೆಸರಲ್ಲಿ ಕ್ಯಾಂಟೀನ್ ಆರಂಭಿಸಿದ ಸನ್ಯಾಸಿ!

ಬಡವರ ಹಸಿವು ನೀಗಿಸುವ ಸಲುವಾಗಿ ಸನ್ಯಾಸಿಯೊಬ್ಬರು ಉತ್ತರಪ್ರದೇಶದ ಉನ್ನಾವೊ-ರಾಯ್ ಬರೇಲಿ ಮಾರ್ಗದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಥಾರ್: ಬಡವರ ಹಸಿವು ನೀಗಿಸುವ ಸಲುವಾಗಿ ಸನ್ಯಾಸಿಯೊಬ್ಬರು ಉತ್ತರಪ್ರದೇಶದ ಉನ್ನಾವೊ-ರಾಯ್ ಬರೇಲಿ ಮಾರ್ಗದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರಲ್ಲಿ ಕ್ಯಾಂಟೀನ್ ತೆರೆಯುವ ಮೂಲಕ ಜನರ ಗಮನ ಸೆಳೆದಿದ್ದಾರೆ. 
ಜುನಾ ಅಖಾರಾದ ನಾಗಾ ಸಾಧು ಎಂದು ಹೇಳಿಕೊಳ್ಳುವ ಸನ್ಯಾಸಿ ಮೂರು ವಾರಗಳ ಹಿಂದಷ್ಟೇ ಈ ಕ್ಯಾಂಟಿನ್ ಆರಂಭಿಸಿದ್ದಾರೆ. ಬಡ ಜನರಿಗೆ ಉಚಿತವಾಗಿ ಆಹಾರ ವಿತರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. 
ರಾಜು ಬಾಬಾ ತಾನೊಬ್ಬ ಶಿವಭಕ್ತ, ರಾಹುಲ್ ಗಾಂಧಿ ಸಹ ಶಿವಭಕ್ತ. ಹೀಗಾಗಿ ನಾವು ಸಹೋದರರಿದ್ದಂತೆ. ಹೀಗಾಗಿ ಅವರ ಹೆಸರಿಲ್ಲಿ ಕ್ಯಾಂಟೀನ್ ಆರಂಭಿಸಿದ್ದೇನೆ. ನಮ್ಮ ಕ್ಯಾಂಟೀನ್ ನಲ್ಲಿ ಪ್ರತಿದಿನ 150ಕ್ಕೂ ಹೆಚ್ಚು ಜನ ಆಹಾರ ಸೇವಿಸುತ್ತಾರೆ. ಸ್ವಇಚ್ಛೆಯಿಂದ ಹಣ ಕೊಟ್ಟರೆ ಮಾತ್ರ ಸ್ವೀಕರಿಸುತ್ತೇವೆ ಎಂದು ಬಾಬಾ ಹೇಳಿಕೊಂಡಿದ್ದಾರೆ. 
ಎಲ್ಲರೂ ಕೂಡಿ ಬಾಳಬೇಕು ಮತ್ತು ಹಂಚಿಕೊಂಡು ತಿನ್ನಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದು ಹೀಗಾಗಿಯೇ ಅವರ ಹೆಸರಿನಲ್ಲಿ ಕ್ಯಾಂಟೀನ್ ತೆರೆದಿರುವುದಾಗಿ ರಾಜು ಬಾಬಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com