ಓಟ್ ರಾಜಕಾರಣ ಹಾಗೂ ಅಭಿವೃದ್ಧಿ ರಾಜಕಾರಣದ ನಡುವೆ ಜನತೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಮೋದಿ ಹೇಳಿದ್ದು, ಓಟ್ ಬ್ಯಾಂಕ್ ರಾಜಕಾರಣ ಮಾಡುವವರೇ ಹಿಂದೂ-ಮುಸ್ಲಿಂ ಎನ್ನುವ ತಾರತಮ್ಯ ಸೃಷ್ಟಿಸುವವರಾಗಿದ್ದಾರೆ, ಅಂತಹವರೇ ಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟುಕೊಂಡು ಲಾಭ ಗಳಿಸಲು ಯತ್ನಿಸುತ್ತಿರುತ್ತಾರೆ. 60 ವರ್ಷಗಳಿಂದ ದೇಶದ ಸಂಪೂರ್ಣ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ. ಈಗ ದೇಶ ಅಭಿವೃದ್ಧಿ ಹೊಂದುತ್ತಿದೆ. ಓಟ್ ಬ್ಯಾಂಕ್ ರಾಜಕಾರಣ ಮಾಡುವವರನ್ನು ರಾಜ್ಯದಲ್ಲಿ ಮತ್ತೆ ಬರುವುದಕ್ಕೆ ಬಿಡಬೇಡಿ ಎಂದು ಮೋದಿ ಜನತೆಗೆ ಕರೆ ನೀಡಿದ್ದಾರೆ.