ಬಿಪ್ಲಬ್ ದೇವ್
ದೇಶ
ತ್ರಿಪುರಾ: ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಸೂಚನೆ ನೀಡಿದ ಸಿಎಂ ಬಿಪ್ಲಬ್ ದೇವ್
ಅಸ್ಸಾಂ ನಲ್ಲಿ ಎನ್ ಆರ್ ಸಿ ಯಶಸ್ವಿಯಾಗಿ ಜಾರಿಯಾದರೆ ಅದನ್ನು ತ್ರಿಪುರಾದಲ್ಲೂ ಜಾರಿಗೆ ತರುವುದಾಗಿ ಸಿಎಂ ಬಿಪ್ಲಬ್ ದೇವ್ ಹೇಳಿದ್ದಾರೆ.
ನವದೆಹಲಿ: ಅಸ್ಸಾಂ ನಲ್ಲಿ ಎನ್ ಆರ್ ಸಿ ಯಶಸ್ವಿಯಾಗಿ ಜಾರಿಯಾದರೆ ಅದನ್ನು ತ್ರಿಪುರಾದಲ್ಲೂ ಜಾರಿಗೆ ತರುವುದಾಗಿ ಸಿಎಂ ಬಿಪ್ಲಬ್ ದೇವ್ ಹೇಳಿದ್ದಾರೆ.
ಬಾಂಗ್ಲಾದಿಂದ ಬಂದಿರುವ ಅಕ್ರಮ ವಲಸಿಗರನ್ನು ಗುರುತಿಸುವುದಕ್ಕಾಗಿ ಅಸ್ಸಾಂ ನಲ್ಲಿ ಎನ್ಆರ್ ಸಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆ ಅಸ್ಸಾಂ ನಲ್ಲಿ ಯಶಸ್ವಿಯಾದರೆ ಅದನ್ನು ತ್ರಿಪುರಾದಲ್ಲೂ ಅಳವಡಿಸುತ್ತೇವೆ, ಅಸ್ಸಾಂ ನಲ್ಲಿ ಏನಾಗಲಿದೆ ಎಂಬುದನ್ನು ಎಲ್ಲರೂ ಗಮನಿಸುತ್ತಿದ್ದೇವೆ ಎಂದು ಬಿಪ್ಲಬ್ ದೇವ್ ಹೇಳಿದ್ದಾರೆ.
ಇಂಡಿಯಾ ಟುಡೆ ಕಾನ್ಲೇವ್ ಈಸ್ಟ್ 2018 ರಲ್ಲಿ ಭಾಗವಹಿಸಿ ಮಾತನಾಡಿರುವ ಬಿಪ್ಲಬ್ ದೇವ್, ಅಸ್ಸಾಂ ನಲ್ಲಿ ಎನ್ ಆರ್ ಸಿ ಯಶಸ್ವಿಯಾಗಿ ಜಾರಿಯಾದರೆ ಅದನ್ನು ತ್ರಿಪುರಾದಲ್ಲೂ ಅಳವಡಿಸಿಕೊಳ್ಳುತ್ತೇವೆ ತ್ರಿಪುರಾ ಅಷ್ಟೇ ಅಲ್ಲದೇ ಇನ್ನೂ ಅನೇಕ ರಾಜ್ಯಗಳು ಎನ್ ಆರ್ ಸಿಯನ್ನು ಜಾರಿಗೊಳಿಸಲು ಮುಂದಾಗಲಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ