#MeToo ಅಭಿಯಾನವನ್ನು ಬೆದರಿಕೆಯೊಡ್ಡಲು ಬಳಸಿಕೊಳ್ಳಲಾಗುತ್ತಿದೆ: ಬಿಜೆಪಿ ಸಂಸದ

ಭಾರತದಲ್ಲಿ #MeToo ಅಭಿಯಾನ ಸಾಕಷ್ಟು ಸದ್ದು ಮಾಡುತ್ತಿದ್ದು ಈಗಾಗಲೇ ಕೆಲವು ವೃತ್ತಿಪರರ ತಲೆದಂಡವೂ ಆಗಿದೆ.
#MeToo ಅಭಿಯಾನವನ್ನು ಬೆದರಿಕೆಗೆ ಬಳಸಿಕೊಳ್ಳಲಾಗುತ್ತಿದೆ: ಬಿಜೆಪಿ ಸಂಸದ
#MeToo ಅಭಿಯಾನವನ್ನು ಬೆದರಿಕೆಗೆ ಬಳಸಿಕೊಳ್ಳಲಾಗುತ್ತಿದೆ: ಬಿಜೆಪಿ ಸಂಸದ
ನವದೆಹಲಿ: ಭಾರತದಲ್ಲಿ #MeToo ಅಭಿಯಾನ ಸಾಕಷ್ಟು ಸದ್ದು ಮಾಡುತ್ತಿದ್ದು ಈಗಾಗಲೇ ಕೆಲವು ವೃತ್ತಿಪರರ ತಲೆದಂಡವೂ ಆಗಿದೆ. ಈಗ #MeToo ಅಭಿಯಾನದ ಬಗ್ಗೆ ಬಿಜೆಪಿ ಸಂಸದ ಉದಿತ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಈ ಅಭಿಯಾನದ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸಿದ್ದಾರೆ. 
ಲೈಂಗಿಕ ಕಿರುಕೊಳಕ್ಕೊಳಗಾದ 10 ವರ್ಷಗಳ ನಂತರ #MeToo ಅಭಿಯಾನದ ಮೂಲಕ ಆರೋಪ ಮಾಡುವುದನ್ನು ಪ್ರಶ್ನಿಸಿರುವ ಉದಿತ್ ರಾಜ್, ಆರೋಪ ಮಾಡುತ್ತಿರುವ ಮಹಿಳೆಯರು ಅಭಿಯಾನವನ್ನು ಬೆದರಿಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಭಾರತದಲ್ಲಿ ಇದು ತಪ್ಪಾಗಿ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ. 
#MeToo ಅಭಿಯಾನ ಮುಖ್ಯವಾದುದ್ದೇ, ಆದರೆ ಕಿರುಕೊಳಕ್ಕೊಳಗಾದ 10 ವರ್ಷಗಳ ನಂತರ ಆರೋಪ ಮಾಡಿದರೆ ಅದರ ಪ್ರಸ್ತುತತೆ ಏನು? 10 ವರ್ಷಗಳ ನಂತರ ಮಾಡಿರುವ ಆರೋಪವನ್ನು ಈಗ ಹೇಗೆ ಸಾಬೀತುಪಡಿಸುತ್ತೀರಿ ಎಂದು ಉದಿತ್ ರಾಜ್ ಪ್ರಶ್ನಿಸಿದ್ದು ಕೇವಲ ಬೆದರಿಕೆಗಾಗಿ MeToo ಅಭಿಯಾನ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com