ಭುವನೇಶ್ವರ್ : ತಿತ್ಲಿ ಚಂಡಮಾರುತದ ಕಾರಣ ದಕ್ಷಿಣ ರಾಜ್ಯ ಕಡೆಗೆ ಆಗಮಿಸುವ ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಂಗಳೂರು-ಹಾಗೂ ಒಡಿಶಾದ ಭುವನೇಶ್ವರ್ ನಡುವೆ ಪಾಸ್ಟ್ ತಾತ್ಕಲ್ ವಿಶೇಷ ರೈಲು ಕಾರ್ಯಾಚರಣೆ ಆರಂಭಿಸಲಿದೆ
ಈ ವಿಶೇಷ ರೈಲು ಇದೇ 15 ರಂದು ಬೆಳಗ್ಗೆ 7-50ಕ್ಕೆ ಭುವನೇಶ್ವರದಿಂದ ಬೆಂಗಳೂರಿಗೆ ಹೊರಡಲಿದೆ ಎಂದು ಪೂರ್ವ ಕರಾವಳಿ ರೈಲ್ವೆ ಮಂಡಳಿ ಮಾಹಿತಿ ನೀಡಿದೆ.
ಭುವನೇಶ್ವರ್- ಬೆಂಗಳೂರು ಮಾರ್ಗ ಮಧ್ಯದಲ್ಲಿ ಬರುವ ಕುರ್ದಾ ರಸ್ತೆ, ಬ್ರಹ್ಮಪುರ್, ಪಾಲ್ಸಾ, ಶ್ರೀಕಾಕುಲಂ, ವಿಜಯನಗರ, ವಿಶಾಖಪಟ್ಟಣ , ರಾಜಮುಂಡ್ರಿ, ವಿಜಯವಾಡ, ಪೆರಂಬೂರು, ಜೊಲಾರ್ ಪೇಟೆ, ಬಂಗಾರಪೇಟೆ, ಕೆ. ಆರ್. ಪುರಂ ನಲ್ಲಿ ಈ ರೈಲು ನಿಲುಗಡೆಯಾಗಲಿದೆ.
Advertisement