ಇನ್ನು ಶುಕ್ರವಾರ 300 ಮಂದಿ ಸೇನಾ ಸಿಬ್ಬಂದಿ ನಡುವೆ ಹೆಲ್ಮೆಟ್ ಧರಿಸಿ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಂಡು ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶ ಮೂಲಕ ಮಹಿಳಾ ಪತ್ರಕರ್ತೆ ಶಬರಿಮಲೆಗೆ ತೆರಳಿದ್ದರು. ಆದರೆ ಸನ್ನಿಧಾನಂಗೆ ಸಮೀಪದಲ್ಲಿರುವ ವಳಿಯ ನದಪ್ಪಂಧಲ್ ನಲ್ಲಿಯೇ ಪ್ರತಿಭಟನಾಕಾರರು ಅವರನ್ನು ತಡೆದಿದ್ದಾರೆ. ಈ ವೇಳೆ ಕೇರಳ ಪೊಲೀಸ್ ವರಿಷ್ಠಾಧಿಕಾರಿಗಳು ಸಂಧಾನ ನಡೆಸಿದ್ದು, ಅಲ್ಲದೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನಿ ಅರ್ಚಕರೂ ಕೂಡ ದೇಗುಲದ ಬಾಗಿಲು ಹಾಕಿ ಬಿಡುವುದಾಗಿ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಅವರನ್ನು ಶಬರಿಮಲೆಯಿಂದ ವಾಪಸ್ ಕಳುಹಿಸಲಾಯಿತು.