ಇದೇ ಸಮಯದಲ್ಲಿ ಜಲಂಧರ್ ನಿಂದ ಅಮೃತಸರಕ್ಕೆ ಮತ್ತು ಅಮೃತಸರದಿಂದ ಜಲಂಧರಕ್ಕೆ ತೆರಳುವ ಎರಡು ರೈಲುಗಳು ಏಕಕಾಲದಲ್ಲಿ ವಿರುದ್ಧ ದಿಕ್ಕಿನಲ್ಲಿ ಅದೇ ಸ್ಥಳದತ್ತ ಧಾವಿಸಿದ್ದವು. ಆದರೆ, ಪಟಾಕಿ ಸದ್ದಿನಿಲ್ಲಿ, ರೈಲು ಆಗಮಿಸಿದ ಸುಳಿವು ಜನರಿಗೆ ಗೊತ್ತಾಗಲಿಲ್ಲ. ಹೀಗಾಗಿ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ನೂರಾರು ಜನರ ಮೇಲೆ ರೈಲು ಹರಿದು ಹೋಗಿದೆ. ಎರಡೂ ದಿಕ್ಕಿನಿಂದ ರೈಲು ಆಗಮಿಸಿದ ಕಾರಣ ಜನರಿಗೆ ತಪ್ಪಿಸಿಕೊಳ್ಳಲೂ ಅವಕಾಶ ಸಿಗಲಿಲ್ಲ. ಪರಿಣಾಮ 61 ಜನರು ಸಾವನ್ನಪ್ಪಿದ್ದಾರೆ.