

ತಿರುವನಂತಪುರಂ: ಆಂಧ್ರ ಪ್ರದೇಶದ ಗುಂಟೂರಿನಿಂದ ಪುರುಷ ಭಕ್ತಾಧಿಗಳ ಗುಂಪಿನಲ್ಲಿ ಆಗಮಿಸಿದ್ದ ಇಬ್ಬರು ಮಹಿಳಾ ಭಕ್ತಾಧಿಗಳನ್ನು ಕೇರಳ ಪೊಲೀಸರು ಇಂದು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದಿಂದ ಬಂದಿದ್ದ ಯಾತ್ರಾರ್ಥಿಗಳ ಗುಂಪಿನಲ್ಲಿ ಮಹಿಳಾ ಭಕ್ತಾಧಿಗಳ ಬಂದಿದ್ದಾರೆ. ಆದರೆ, ಶಬರಿಮಲೆಯಲ್ಲಿ ವಿಶೇಷ ಆಚರಣೆ ಬಗ್ಗೆ ಏನೂ ಗೊತ್ತಿಲ್ಲ. ಇವರನ್ನು ನೋಡಿದ ಕೆಲವರು ಹಿಂದಕ್ಕೆ ಹೋಗುವಂತೆ ಹೇಳಿದ್ದಾರೆ. ಆದರೆ, ಹಿಂದೆ ಹೋಗಲು ಒಪ್ಪದ ಅವರು ನಿಲಕ್ಕಲ್ ಗೆ ವಾಪಾಸ್ ಹೋಗಲು ಬಯಸಿದ್ದರು ಎಂದು ಐಜಿ ಎಸ್ . ಶ್ರೀಜಿತ್ ತಿಳಿಸಿದ್ದಾರೆ.
ಅಯ್ಯಪ್ಪ ದೇವಸ್ಥಾನ ಮುಚ್ಚುವ ಬೆದರಿಯ ನಡುವೆ ಟ್ರಾವಂಕೂರು ದೇವಸ್ವಂ ಮಂಡಳಿ ಮತ್ತು ಎಲ್ ಡಿಎಫ್ ಸರ್ಕಾರ ಇಡೀ ಪರಿಸ್ಥಿತಿಯ ಪರಾಮರ್ಶೆ ನಡೆಸುವುದಾಗಿ ಹೇಳಿಕೆ ನೀಡಿವೆ.
ಶಬರಿಮಲೆ ಸನ್ನಿಧಾನದಲ್ಲಿ ಅಶಿಸ್ತು ಎಲೆ ಮೀರದಂತೆ ಕ್ರಮ ಕೈಗೊಳ್ಳಲಾಗುವುದು, ಅಂತೆಯೇ ಈ ವಿಚಾರದಲ್ಲಿ ಟಿಡಿಬಿ ಸೂಕ್ತ ಕ್ರಮ ಕೈಗೊಳ್ಳಬಹುದೆಂದು ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.
Advertisement