ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಕೇರಳ ಸಚಿವರ ಗನ್ ಮ್ಯಾನ್

ಕೇರಳ ಜಲ ಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ ಥಾಮಸ್ ಅವರ ಗನ್ ಮ್ಯಾನ್ ಕೊಲ್ಲಂನ ಕಡಕ್ಕಲ್ ನಿವಾಸದಲ್ಲಿ...
ಕೇರಳ ಸಚಿವ ಮ್ಯಾಥ್ಯೂ ಥಾಮಸ್
ಕೇರಳ ಸಚಿವ ಮ್ಯಾಥ್ಯೂ ಥಾಮಸ್
ತಿರುವನಂತಪುರಂ: ಕೇರಳ ಜಲ ಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ ಥಾಮಸ್ ಅವರ ಗನ್ ಮ್ಯಾನ್ ಕೊಲ್ಲಂನ ಕಡಕ್ಕಲ್ ನಿವಾಸದಲ್ಲಿ ಸರ್ವಿಸ್ ರಿವಾಲ್ವಾರ್ ನಿಂದ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಗನ್ ಮ್ಯಾನ್ ಸುಜಿತ್(28) ಎಂದು ಗುರುತಿಸಲಾಗಿದ್ದು, ಅವರ ಮನೆಯಲ್ಲಿ ತಲೆಗೆ ಶೂಟ್ ಮಾಡಿಕೊಂಡ ಸ್ಥಿತಿಯಲ್ಲಿ ಶವಪತ್ತೆಯಾಗಿದೆ. ಅಲ್ಲದೆ ಸಾಯುವ ಸುಜಿತ್ ತಮ್ಮ ಎರಡು ಕೈಯಗಳ ನರಗಳನ್ನು ಕತ್ತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. 
ಸುಜಿತ್ ಅವಿವಾಹಿತನಾಗಿದ್ದು, ಸಾಯುವ ಮುನ್ನ ಪತ್ರ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮದ್ಯೆ, ಸುಜಿತ್ ಅವರು ಕಳೆದ ಎರಡು ವರ್ಷಗಳಿಂದ ಥಾಮಸ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ ರಜೆಯಲ್ಲಿದ್ದರು ಎಂದು ಸಚಿವರ ಕಚೇರಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com