ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಂಧನಕ್ಕೊಳಗಾದ ನಕ್ಸಲ್ ಪರ ನಿಲುವು ಹೊಂದಿದ್ದ ಸಾಮಾಜಿಕ ಕಾರ್ಯಕರ್ತರ ಬಂಧನದ ನಂತರ ಮಾವೋವಾದಿಗಳು ಹಾಗೂ ಅವರಿಗೆ ಸಿಗುತ್ತಿರುವ ಬೆಂಬಲದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿ ತನ್ನ ಕೈಪಿಡಿಯಲ್ಲಿ ಮಾವೋವಾದಿಗಳ ಜೊತೆಗೆ ದೇಶದಲ್ಲಿ ನಡೆಯುತ್ತಿರುವ ಬಲವಂತದ ಮತಾಂತರದ ಬಗ್ಗೆಯೂ ಮಾತನಾಡಿದ್ದು, ಬಲವಂತದ ಮತಾಂತರದಿಂದ ಧಾರ್ಮಿಕ ಜನಸಂಖ್ಯೆಯಲ್ಲಿ ಬದಲಾವಣೆಯಾಗುತ್ತಿದ್ದು, ದೇಶಕ್ಕೆ ಆಂತರಿಕ ಅಪಾಯ ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.