ಭೀಕರ ಅಪಘಾತ: ಗುಡ್ಡ ಕುಸಿದು ಪ್ರಪಾತಕ್ಕೆ ಉರುಳಿದ ಬಸ್, 13 ಯಾತ್ರಾರ್ಥಿಗಳ ದುರ್ಮರಣ!

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉತ್ತರಾಖಂಡ್ ನ ಉತ್ತರ ಕಾಶಿ ಜಿಲ್ಲೆಯಲ್ಲಿನ ಗಂಗೋತ್ರಿ ದೇವಸ್ಥಾನದ ದರ್ಶನ ಮಾಡಿ ಹಿಂದಿರುಗುವಾಗ ಟೆಂಪೊ ಟ್ರಾವೆಲರ್ ಮೇಲೆ ಗುಡ್ಡ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಡೆಹ್ರಾಡೂನ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉತ್ತರಾಖಂಡ್ ನ ಉತ್ತರ ಕಾಶಿ ಜಿಲ್ಲೆಯಲ್ಲಿನ ಗಂಗೋತ್ರಿ ದೇವಸ್ಥಾನದ ದರ್ಶನ ಮಾಡಿ ಹಿಂದಿರುಗುವಾಗ ಟೆಂಪೊ ಟ್ರಾವೆಲರ್ ಮೇಲೆ ಗುಡ್ಡ ಕುಸಿದು ಟೆಂಪೊ ಪ್ರಪಾತಕ್ಕೆ ಉರುಳಿದ ಪರಿಣಾಮ 13 ಯಾತ್ರಾರ್ಥಿಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. 
ಟೆಂಪೊ ಟ್ರಾವೆಲರ್ ನಲ್ಲಿ 15 ಜನರಿದ್ದು ಈ ಪೈಕಿ ಇಬ್ಬರು ಹುಡುಗಿಯರು ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಲು ಮುಂದಾದರು. ಆದರೆ ಅಷ್ಟರಲ್ಲೇ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. 
ಈ ಭೀಕರ ಅಪಘಾತದಲ್ಲಿ 13 ಮಂದಿ ಯಾತ್ರಾರ್ಥಿಗಳು ದುರ್ಮರಣ ಹೊಂದಿದ್ದು ಈ ಬಗ್ಗೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com