ಬೋಫೋರ್ಸ್ ಹಗರಣ ಪ್ರಕರಣ ಸಂಬಂಧ ಬಿಜೆಪಿ ಕಾಂಗ್ರೆಸ್ ವಿರುದ್ಧ ಅಭಿಯಾನ ನಡೆಸಿತ್ತು. ಆದರೆ, ರಾಜೀವ್ ಗಾಂಧಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರಕಿರಲಿಲ್ಲ. ಒಪ್ಪಂದ ಮಾಡಿಕೊಳ್ಳುವುದಕ್ಕೂ ಮುನ್ನ ಸಾಕಷ್ಟು ಸಮಿತಿಯ ಗುಂಪುಗಳು ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿತ್ತು. ಭ್ರಷ್ಟಾಚಾರಕ್ಕೆ ಎಲ್ಲಿಯೂ ದಾರಿಮಾಡಿಕೊಟ್ಟಿರಲಿಲ್ಲ. ರಫೇಲ್ ಒಪ್ಪಂದದಲ್ಲಿ ಅಷ್ಟೊಂದು ವಿಶ್ವಾಸವಿರುವುದೇ ಆದರೆ, ಮೋದಿ ಸರ್ಕಾರವೇಕೆ ಸಂಸದೀಯ ಜಂಟಿ ಸಮಿತಿಯನ್ನು ರಚನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.