ಕ್ಯಾಮರಾ ಮುಂದೆ ಗಳಗಳನೆ ಕಣ್ಣೀರಿಟ್ಟ ಸಂಸದ ಪಪ್ಪು ಯಾದವ್

ಭಾರತ್ ಬಂದ್ ಬೆಂಬಲಿಗರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಕಣ್ಣೀರಿಟ್ಟಿದ್ದಾರೆ.
ಪಪ್ಪು ಯಾದವ್
ಪಪ್ಪು ಯಾದವ್
ಭಾರತ್ ಬಂದ್ ಬೆಂಬಲಿಗರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಕಣ್ಣೀರಿಟ್ಟಿದ್ದಾರೆ. 
"ಬಿಹಾರದ ಮುಜಾಫರ್ ಪುರದಲ್ಲಿ ಭಾರತ್ ಬಂದ್ ಬೆಂಬಲಿಗರು ಮನಸೋ ಇಚ್ಛೆ ನನ್ನನ್ನು ಥಳಿಸಿದ್ದಾರೆ. ನನ್ನ ಕಾರ್ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುವುದಕ್ಕೂ ಮುನ್ನ ಪ್ರತಿಭಟನಾ ನಿರತರು ನನ್ನ ಜಾತಿಯನ್ನು ಕೇಳಿದರು. ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ ಎಂದು ಹೇಳಿದರೂ ಸಹ ನನ್ನ ವಿರುದ್ಧ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿ ನಿಂದಿಸಿದರು" ಎಂದು ಕ್ಯಾಮರಾಗಳ ಮುಂದೆ ಪಪ್ಪು ಯಾದವ್ ಕಣ್ಣೀರಿಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com