2016ರ ಸೆಪ್ಟೆಂಬರ್ 29ರಂದು ಪಾಕಿಸ್ತಾನದ ಗಡಿಯಿಂದ 15 ಕಿ.ಮೀ ಒಳಗೆ ನುಗ್ಗಿ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತು ಮಾತನಾಡಿದ ರಾಜೇಂದ್ರ ಅವರು, ತಾವು ನೌಶೆರದಲ್ಲಿ ಸೇವೆಯಲ್ಲಿರುವ ವೇಳೆ ಚಿರತೆಗಳು ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದವು. ಚಿರತೆಗಳಿಂದ ರಕ್ಷಿಸಿಕೊಳ್ಳಲು ನಾಯಿಗಳು ರಾತ್ರಿ ಹೊತ್ತು ಹೊರಗೆ ಬರುತ್ತಿರಲಿಲ್ಲ. ಸರ್ಜಿಕಲ್ ದಾಳಿ ವೇಳೆ ಯೋಧರು ಗ್ರಾಮ, ಹಳ್ಳಿಗಳ ನಡುವೆ ಸಾಗುವ ವೇಳೆ ನಾಯಿಗಳಿಂದ ದಾಳಿಯಾಗುವ ಸಂಭವವಿತ್ತು. ಇದನ್ನು ತಪ್ಪಿಸಲು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಬಳಸಲಾಗಿತ್ತು ಎಂದರು.