ವಿಧಿಯಾಟದ ಮುಂದೆ ಯಾರೂ ಸಮರ್ಥರಲ್ಲ; 61 ಜನರ ಬಲಿ ಪಡೆದ ಬಸ್ ಚಾಲಕ ಪಡೆದಿದ್ರೂ ಅತ್ಯುತ್ತಮ ಚಾಲಕ ಪ್ರಶಸ್ತಿ!

ವಿಧಿಯಾಟದ ಮುಂದೆ ಯಾರೂ ಸಮರ್ಥರಲ್ಲ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಹೌದು, ತೆಲಂಗಾಣದಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 61 ಜನರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಹೈದರಾಬಾದ್: ವಿಧಿಯಾಟದ ಮುಂದೆ ಯಾರೂ ಸಮರ್ಥರಲ್ಲ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಹೌದು, ತೆಲಂಗಾಣದಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 61 ಜನರು ಸಾವಿಗೀಡಾಗಿದ್ದು ಬಸ್ ನ ಚಾಲಕ ಅತ್ಯುತ್ತಮ ಚಾಲಕ ಪ್ರಶಸ್ತಿ ಸ್ವೀಕರಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. 
ಬಸ್ ಚಾಲಕರಾಗಿದ್ದ ಶ್ರೀನಿವಾಸ್ ಅವರು ಬಸ್ ದುರಂತದಲ್ಲಿ ಮೃತಪಟ್ಟಿದ್ದು ಕಳೆದ ತಿಂಗಳಷ್ಟೇ ಅತ್ಯುತ್ತಮ ಚಾಲಕ ಪ್ರಶಸ್ತಿ ಪಡೆದುದಲ್ಲದೆ, ಈ ಹಿಂದೆ ಇಂಧನ ದಕ್ಷತೆಗಾಗಿ ಪುರಸ್ಕೃತರಾಗಿದ್ದರು. 
ಇನ್ನೊಂದೆಡೆ ಬಸ್ ದುರಂತಕ್ಕೆ ಇಂಧನ ಉಳಿಸಲು ಬಸ್ ಚಾಲಕ ಶಾರ್ಟ್ ಕಟ್ ತೆಗೆದುಕೊಂಡಿರುವುದೇ ಕಾರಣವಿರಬಹುದೇ ಎಂಬ ವರದಿಗಳು ಕೇಳಿಬಂದಿದ್ದು ಇದನ್ನು  ಟಿಎಸ್ಆರ್ಟಿಸಿ ಸಿಬ್ಬಂದಿ ನಿರಾಕರಿಸಿದ್ದಾರೆ. 
ಏನೇ ಆಗಲಿ ಅತ್ಯುತ್ತಮ ಚಾಲಕ ಪ್ರಶಸ್ತಿ ಪಡೆದ ಚಾಲಕನಿಂದಲೇ ಭೀಕರ ಅಪಘಾತ ಸಂಭವಿಸಿ 61 ಜನರ ಪ್ರಾಣ ಹೋಗಿರುವುದು ಮಾತ್ರ ದುರಾದುಷ್ಟಕರ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com