ನಮ್ಮ ಪೂರ್ವಜರು ರಾಮಮಂದಿರ ನಾಶ ಮಾಡಿದ್ದು ತಪ್ಪು, ಕ್ಷಮಿಸಿ: ಮೊಘಲ್ ವಂಶಸ್ಥ!

ನಮ್ಮ ಪೂರ್ವಜರು ಅಯೋಧ್ಯೆಯ ರಾಮ ಮಂದಿರ ನಾಶ ಮಾಡಿದ್ದು ತಪ್ಪು, ಕ್ಷಮಿಸಿ ಎಂದು ಮೊಘಲ್ ರಾಜ ಬಹದ್ದೂಸ್ ಶಾ ಝವರ್ ನ ಸ್ವಯಂ ಘೋಷಿತ ವಂಶಸ್ಥ ಯಾಕೂಬ್ ಹಬೀಬುದ್ದೀನ್ ಟೂಸಿ ಹಿಂದೂ....
ನಮ್ಮ ಪೂರ್ವಜರು ರಾಮಮಂದಿರ ನಾಶ ಮಾಡಿದ್ದು ತಪ್ಪು, ಕ್ಷಮಿಸಿ: ಮೊಘಲ್ ವಂಶಸ್ಥ!
ನಮ್ಮ ಪೂರ್ವಜರು ರಾಮಮಂದಿರ ನಾಶ ಮಾಡಿದ್ದು ತಪ್ಪು, ಕ್ಷಮಿಸಿ: ಮೊಘಲ್ ವಂಶಸ್ಥ!
ಲಖನೌ: ನಮ್ಮ ಪೂರ್ವಜರು ಅಯೋಧ್ಯೆಯ ರಾಮ ಮಂದಿರ ನಾಶ ಮಾಡಿದ್ದು ತಪ್ಪು, ಕ್ಷಮಿಸಿ ಎಂದು ಮೊಘಲ್ ರಾಜ ಬಹದ್ದೂಸ್ ಶಾ ಝವರ್ ನ ಸ್ವಯಂ ಘೋಷಿತ ವಂಶಸ್ಥ ಯಾಕೂಬ್ ಹಬೀಬುದ್ದೀನ್  ಟೂಸಿ ಹಿಂದೂ ಮಹಾಸಭಾಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. 
ನನ್ನ ಪೂರ್ವಜ ಬಾಬರ್ ನ ಕಮಾಂಡರ್ ಆಗಿದ್ದ ಮಿರ್ ಬಾಕಿ,  ಆತ ಅಯೋಧ್ಯೆಯ ರಾಮ ಮಂದಿರವನ್ನು ನಾಶ ಮಾಡಿದ್ದ, ನಾನು ಬಾಬರ್ ವಂಶದ 6 ನೇ ತಲೆಮಾರಿನವನಾಗಿದ್ದು, ಈ ಹಿನ್ನೆಲೆಯಲ್ಲಿ ರಾಮ ಮಂದಿರ ನಾಶ ಮಾಡಿದ್ದಕ್ಕಾಗಿ ಎಲ್ಲಾ ರಾಮ ಭಕ್ತರಲ್ಲಿ ಕ್ಷಮೆ ಕೋರುತ್ತೇನೆ ಎಂದು ಟೂಸಿ ಹೇಳಿದ್ದಾರೆ. 
ಕ್ಷಮಾಪಣಾ ಪತ್ರವನ್ನು ಹಿಂದೂ ಮಹಾಸಭಾದ ರಾಷ್ಟ್ರಾಧ್ಯಕ್ಷ  ಸ್ವಾಮಿ ಚಕ್ರಪಾಣಿ ಮಹಾರಜ್ ಅವರಿಗೆ ಹಸ್ತಾಂತರಿಸಿರುವ ಯಾಕೂಬ್ ಹಬೀಬುದ್ದೀನ್ ಟೂಸಿ, ಬಾಬರ್ ಸಹ ರಾಮ ಮಂದಿರ ನಾಶವನ್ನು ವಿರೋಧಿಸುವವರಾಗಿದ್ದರು. ಸಂತರು ಮಹಾತ್ಮರು, ದೇವಾಲಯದ ರಕ್ಷಣೆಯನ್ನು ಗೌರವಿಸಲು ಸೂಚಿಸುತ್ತಿದ್ದರು ಎಂದು ಯಾಕೂಬ್ ಹಬೀಬುದ್ದೀನ್ ಟೂಸಿ ಹೇಳಿದ್ದಾರೆ. 
ಮುಸ್ಲಿಮರು ಬಾಬ್ರಿ ಮಸೀದಿ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು, ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆದು ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ಸಹಕರಿಸಬೇಕು, ಈ ಮೂಲಕ ದೇಶದಲ್ಲಿ ಹಿಂದೂ-ಮುಸ್ಲಿಂ ಒಗ್ಗಟ್ಟನ್ನು ಪ್ರದರ್ಶಿಸುವಂತಾಗಬೇಕು ಎಂದು ಟೂಸಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com