ಸೇನೆ ತ್ಯಜಿಸಿ ಇಲ್ಲ ಸಾಯಿರಿ: ಕಾಶ್ಮೀರಿ ಸೈನಿಕರಿಗೆ ಹಿಜ್ಬುಲ್ ಉಗ್ರರ ಎಚ್ಚರಿಕೆ

ಭಾರತೀಯ ಸೇನೆ ಹಾಗೂ ಪೊಲೀಸ್‌ ಇಲಾಖೆ ಸೇರಿದಂತೆ ಭದ್ರತಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಸ್ಲಿಂ ಸಿಬ್ಬಂದಿ ನಾಲ್ಕು ದಿನದೊಳಗೆ ಕೆಲಸ ತ್ಯಜಿಸಬೇಕು ಎಂದು ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಭಾರತೀಯ ಸೇನೆ ಹಾಗೂ ಪೊಲೀಸ್‌ ಇಲಾಖೆ ಸೇರಿದಂತೆ ಭದ್ರತಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಸ್ಲಿಂ ಸಿಬ್ಬಂದಿ ನಾಲ್ಕು ದಿನದೊಳಗೆ ಕೆಲಸ ತ್ಯಜಿಸಬೇಕು ಎಂದು ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಎಚ್ಚರಿಕೆ ನೀಡಿದೆ.
ಮಗನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಹತ್ಯೆ ಬೆನ್ನಲ್ಲೇ ಕಾಶ್ಮೀರಿ ಯುವಕರಿಗೆ ಹಿಜ್ಬುಲ್ ಮುಜಾಹಿದ್ದೀನ್ ಎಚ್ಚರಿಕೆ ನೀಡಿದ್ದು, ಭಾರತೀಯ ಸೇನೆ ಹಾಗೂ ಪೊಲೀಸ್‌ ಇಲಾಖೆ, ಇತರೆ ಭದ್ರತಾ ಪಡೆ, ಸರ್ಕಾರಿ ಉದ್ಯೋಗಗಳಲ್ಲಿರುವ ಕಾಶ್ಮೀರಿ ಯುವಕರು ಕೂಡಲೇ ತಮ್ಮ ಕೆಲಸ ತ್ಯಜಿಸಬೇಕು ಎಂದು ಹೇಳಿದೆ. ಇಲ್ಲವಾದಲ್ಲಿ ನಾಲ್ಕು ದಿನಗಳಲ್ಲಿ ಸಾಯಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಉಗ್ರರ ಗುಂಪೊಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಭದ್ರತಾ ಪಡೆಗಳನ್ನು ಸೇರಿರುವ ಕಾಶ್ಮೀರ ಯುವಕರು ಕೂಡಲೇ ತಮ್ಮ ಕೆಲಸ ತ್ಯಜಿಸಬೇಕು. ಇಲ್ಲವಾದಲ್ಲಿ ನಿಮ್ಮನ್ನೂ ಸೇರಿದಂತೆ ಕುಟುಂಬದವರನ್ನೆಲ್ಲ ಮುಗಿಸುತ್ತೇವೆ, ಹುಷಾರ್‌.. ಎಂದು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಕಾಶ್ಮೀರ ನಿವಾಸಿ ಮುಸ್ಲಿಮರಿಗೆ ಬೆದರಿಕೆ ಹಾಕಿದ್ದಾರೆ. ಉಗ್ರರ ಕುರಿತು ಸೇನೆಗೆ ಮಾಹಿತಿ ನೀಡುತ್ತಿರುವ ಕಾಶ್ಮೀರಿ ಮಾಹಿತಿ ದಾರರು ಎಲ್ಲ ಬಂದ್ ಮಾಡಿ ಕೆಲಸ ತ್ಯಜಿಸಿ ಮನೆಯಲ್ಲಿ ಕುಳಿತುಕೊಳ್ಳಿ, ಕೇವಲ 6 ಸಾವಿರ ರೂಗಳಿಗೆ ಆಸೆ ಪಟ್ಟು ನಿಮ್ಮ ಮತ್ತು ನಿಮ್ಮ ಕುಟುಂಬಸ್ಥರ ಜೀವ ಬಲಿ ನೀಡಬೇಡಿ ಎಂದು ಬೆದರಿಕೆ ಹಾಕಲಾಗಿದೆ.
ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರ ಅಸಲಿತನದ ಪತ್ತೆಗೆ ಸೇನಾ ಅಧಿಕಾರಿಗಳು ಕಸರತ್ತು ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com