ರಫೇಲ್ ಒಪ್ಪಂದ ಕುರಿತು ಸಮಿತಿ ಅಂತಿಮ ನಿರ್ಧಾರಗಳನ್ನು ಕೈಗೊಂಡಿತ್ತು. ಈ ವೇಳೆ ಮಾಜಿ ರಕ್ಷಣಾ ಸಚಿವ ಎಕೆ.ಆ್ಯಂಟನಿಯವರ ಮಧ್ಯಪ್ರವೇಶದಿಂದ ಒಪ್ಪಂದ ರದ್ದಾಗುವಂತಾಗಿತ್ತು. ರಫೇಲ್ ಒಪ್ಪಂದ ಹೆಚ್ಎಎಲ್'ಗೆ ಸಿಗಲು ಆ್ಯಂಟನಿ ಬೆಂಬಲ ನೀಡಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಆರೋಪಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಆ್ಯಂಟನಿಯವರು ರಕ್ಷಣಾ ಸಚಿವೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಮುಚ್ಚಿಡುತ್ತಿದ್ದಾರೆ. ದೇಶದ ಭದ್ರತಾ ವಿಚಾರದಲ್ಲಿ ರಾಜಿ ಮಾಡುವ ಮೂಲಕ ಹಾಲಿ ಸರ್ಕಾರ ತಪ್ಪು ಮಾಡುತ್ತಿದೆ. ಹಾಲಿ ಸರ್ಕಾರ ಹೇಳುವಂತೆ ಯುಪಿಎ ಸರ್ಕಾರ ನಡೆಸಿದ್ದ ಒಪ್ಪಂದಕ್ಕಿಂದ ಮೋದಿ ಸರ್ಕಾರ ನಡೆಸಿದ ಒಪ್ಪಂದವೇ ಅಗ್ಗದ್ದಾಗಿದ್ದರೆ, ಕೇವಲ 36 ವಿಮಾನಗಳನ್ನೇಕೆ ಖರೀತಿ ಮಾಡಲಾಗುತ್ತಿದ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಹಾಲಿ ಸರ್ಕಾರದ ಅವಧಿಯಲ್ಲಿ ರಚನೆಯಾಗುವ ಜೆಪಿಸಿಯಲ್ಲಿ ಸರ್ಕಾರದ ಪರ ಇರುವ ಸದರಸ್ಯರೇ ಹೆಚ್ಚು ಇರಲಿದ್ದಾರೆ. ಸಮಿತಿ ಕಡತಗಳನ್ನು ಪರಿಶೀಲಿಸಿ ನಿರ್ಧರಿಸಲಿ. ಅದಕ್ಕೆ ಸರ್ಕಾರ ಹಿಂಜರಿಯುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ 2013ರ ಒಪ್ಪಂದದಲ್ಲಿ ತಾವು ಮಧ್ಯಪ್ರವೇಶಿಸಿದ್ದು ಅಂತಿಮ ಪಡಿಸಿದ್ದು ಎಂಬ ಆರೋಪವನ್ನೂ ತಿರಸ್ಕರಿಸಿದ್ದಾರೆ.