ರಫೇಲ್: 'ಹೆಚ್ಎಎಲ್ ಸಾಮರ್ಥ್ಯ' ಕುರಿತು ಸುಳ್ಳು ಹೇಳಿದ್ದ ರಕ್ಷಣಾ ಸಚಿವರು ರಾಜಿನಾಮೆ ನೀಡಲಿ- ರಾಹುಲ್

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಎಎಲ್ ಸಾಮರ್ಥ್ಯ ಕುರಿತು ಸುಳ್ಳು ಹೇಳಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಿಕ್ಕಿಹಾಕಿಕೊಂಡಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು...
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
Updated on
ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಎಎಲ್ ಸಾಮರ್ಥ್ಯ ಕುರಿತು ಸುಳ್ಳು ಹೇಳಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಿಕ್ಕಿಹಾಕಿಕೊಂಡಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಆಗ್ರಹಿಸಿದ್ದಾರೆ. 
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ರಫೇಲ್ ಒಪ್ಪಂದ ಕುರಿತಂತೆ ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್ (ಹೆಚ್ಎಎಲ್) ಮಾಜಿ ಮುಖ್ಯಸ್ಥರೇ ರಕ್ಷಣಾ ಸಚಿವರ ಸುಳ್ಳು ಕುರಿತು ಬೆಟ್ಟು ಮಾಡಿದ್ದು, ಇದೀಗ ರಕ್ಷಣಾ ಸಚಿವರ ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಅವರು ಅಸಮರ್ಥನೀಯರಾಗಿದ್ದಾರೆಂದು ಹೇಳಿದ್ದಾರೆ. 
ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡ ರಫೇಲ್ ಸಚಿವರು ಇದೀಗ ಬಹಿರಂಗವಾಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹೆಚ್ಎಎಲ್ ಮಾಜಿ ಮುಖ್ಯಸ್ಥರು, ಟಿ.ಎಸ್ ರಾಜು ಅವರು ರಚಿವರ ಸುಳ್ಳು ಕುರಿತು ಬೆಟ್ಟು ಮಾಡಿದ್ದಾರೆ. ಹೀಗಾಗಿ ರಕ್ಷಣಾ ಸಚಿವೆ ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಅವರು ಅಸಮರ್ಥನೀಯರಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. 
ರಫೇಲ್ ಒಪ್ಪಂದ ಕುರಿತು ಸಮಿತಿ ಅಂತಿಮ ನಿರ್ಧಾರಗಳನ್ನು ಕೈಗೊಂಡಿತ್ತು. ಈ ವೇಳೆ ಮಾಜಿ ರಕ್ಷಣಾ ಸಚಿವ ಎಕೆ.ಆ್ಯಂಟನಿಯವರ ಮಧ್ಯಪ್ರವೇಶದಿಂದ ಒಪ್ಪಂದ ರದ್ದಾಗುವಂತಾಗಿತ್ತು. ರಫೇಲ್ ಒಪ್ಪಂದ ಹೆಚ್ಎಎಲ್'ಗೆ ಸಿಗಲು ಆ್ಯಂಟನಿ ಬೆಂಬಲ ನೀಡಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಆರೋಪಿಸಿದ್ದರು. 

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಆ್ಯಂಟನಿಯವರು ರಕ್ಷಣಾ ಸಚಿವೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಮುಚ್ಚಿಡುತ್ತಿದ್ದಾರೆ. ದೇಶದ ಭದ್ರತಾ ವಿಚಾರದಲ್ಲಿ ರಾಜಿ ಮಾಡುವ ಮೂಲಕ ಹಾಲಿ ಸರ್ಕಾರ ತಪ್ಪು ಮಾಡುತ್ತಿದೆ. ಹಾಲಿ ಸರ್ಕಾರ ಹೇಳುವಂತೆ ಯುಪಿಎ ಸರ್ಕಾರ ನಡೆಸಿದ್ದ ಒಪ್ಪಂದಕ್ಕಿಂದ ಮೋದಿ ಸರ್ಕಾರ ನಡೆಸಿದ ಒಪ್ಪಂದವೇ ಅಗ್ಗದ್ದಾಗಿದ್ದರೆ, ಕೇವಲ 36 ವಿಮಾನಗಳನ್ನೇಕೆ ಖರೀತಿ ಮಾಡಲಾಗುತ್ತಿದ ಎಂದು ಪ್ರಶ್ನಿಸಿದ್ದಾರೆ. 

ಅಲ್ಲದೆ, ಹಾಲಿ ಸರ್ಕಾರದ ಅವಧಿಯಲ್ಲಿ ರಚನೆಯಾಗುವ ಜೆಪಿಸಿಯಲ್ಲಿ ಸರ್ಕಾರದ ಪರ ಇರುವ ಸದರಸ್ಯರೇ ಹೆಚ್ಚು ಇರಲಿದ್ದಾರೆ. ಸಮಿತಿ ಕಡತಗಳನ್ನು ಪರಿಶೀಲಿಸಿ ನಿರ್ಧರಿಸಲಿ. ಅದಕ್ಕೆ ಸರ್ಕಾರ ಹಿಂಜರಿಯುತ್ತಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ 2013ರ ಒಪ್ಪಂದದಲ್ಲಿ ತಾವು ಮಧ್ಯಪ್ರವೇಶಿಸಿದ್ದು ಅಂತಿಮ ಪಡಿಸಿದ್ದು ಎಂಬ ಆರೋಪವನ್ನೂ ತಿರಸ್ಕರಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com