ಸುಪ್ರೀಂ ಚಾಟಿ ಬೆನ್ನಲ್ಲೇ ವಾಟ್ಸ್ ಆಪ್ ಗೆ ದೂರು ನಿರ್ವಹಣೆ ಅಧಿಕಾರಿ ನೇಮಕ

ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ವಾಟ್ಸ್ ಆಪ್ ದೂರು ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಿದೆ.
ಸುಪ್ರೀಂ ಚಾಟಿ ಬೆನ್ನಲ್ಲೇ ವಾಟ್ಸ್ ಆಪ್ ಗೆ ದೂರು ನಿರ್ವಹಣೆ ಅಧಿಕಾರಿ ನೇಮಕ
ಸುಪ್ರೀಂ ಚಾಟಿ ಬೆನ್ನಲ್ಲೇ ವಾಟ್ಸ್ ಆಪ್ ಗೆ ದೂರು ನಿರ್ವಹಣೆ ಅಧಿಕಾರಿ ನೇಮಕ
ನವದೆಹಲಿ: ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ವಾಟ್ಸ್ ಆಪ್ ದೂರು ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಿದೆ. 
ವಾಟ್ಸ್ ಆಪ್ ನಲ್ಲಿ ಸುಳ್ಳು ಸಂದೇಶಗಳು ಹರಡಲಾಗುತ್ತಿದ್ದು, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕೆಂಬ ಒತ್ತಡ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸ್ ಅಪ್ ಭಾರತದ ದೂರು ನಿರ್ವಹಣೆ ಅಧಿಕಾರಿಯನ್ನಾಗಿ ಕೋಮಲ್ ಲಾಹಿರಿ ಎಂಬುವವರನ್ನು ನೇಮಕ ಮಾಡಿದೆ. 
ದೂರು ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಿರುವ ಬಗ್ಗೆ ವಾಟ್ಸ್ ಆಪ್ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದ್ದು, ದೂರುಗಳಿದ್ದರೆ ಅದನ್ನು ವಾಟ್ಸ್ ಆಪ್ ಇ-ಮೇಲ್ ಮೂಲಕ ಕೋಮಲ್ ಲಾಹಿರಿ ಅವರಿಗೆ ತಲುಪಿಸಬಹುದಾಗಿದೆ. 
ಇತ್ತೀಚೆಗೆ ವಾಟ್ಸ್‌ ಆ್ಯಪ್‌ನಲ್ಲಿ ಹರಡಿದ ಸುಳ್ಳು ಸುದ್ದಿಗಳಿಂದಾಗಿ ಸಾಮೂಹಿಕ ಥಳಿಸಿ ಹತ್ಯೆಯಂಥ ಪ್ರಕರಣಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ದೂರು ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com