ನವದೆಹಲಿ: ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ವಾಟ್ಸ್ ಆಪ್ ದೂರು ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಿದೆ.
ವಾಟ್ಸ್ ಆಪ್ ನಲ್ಲಿ ಸುಳ್ಳು ಸಂದೇಶಗಳು ಹರಡಲಾಗುತ್ತಿದ್ದು, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕೆಂಬ ಒತ್ತಡ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸ್ ಅಪ್ ಭಾರತದ ದೂರು ನಿರ್ವಹಣೆ ಅಧಿಕಾರಿಯನ್ನಾಗಿ ಕೋಮಲ್ ಲಾಹಿರಿ ಎಂಬುವವರನ್ನು ನೇಮಕ ಮಾಡಿದೆ.
ದೂರು ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಿರುವ ಬಗ್ಗೆ ವಾಟ್ಸ್ ಆಪ್ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದ್ದು, ದೂರುಗಳಿದ್ದರೆ ಅದನ್ನು ವಾಟ್ಸ್ ಆಪ್ ಇ-ಮೇಲ್ ಮೂಲಕ ಕೋಮಲ್ ಲಾಹಿರಿ ಅವರಿಗೆ ತಲುಪಿಸಬಹುದಾಗಿದೆ.
ಇತ್ತೀಚೆಗೆ ವಾಟ್ಸ್ ಆ್ಯಪ್ನಲ್ಲಿ ಹರಡಿದ ಸುಳ್ಳು ಸುದ್ದಿಗಳಿಂದಾಗಿ ಸಾಮೂಹಿಕ ಥಳಿಸಿ ಹತ್ಯೆಯಂಥ ಪ್ರಕರಣಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ದೂರು ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿತ್ತು.