ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸವಾನ್ ಪಾರ್ಕ್ ಸಮೀಪದ ಈ ಕಟ್ಟಡದಲ್ಲಿ ಬಾಡಿಗೆದಾರರು ಮಾತ್ರ ವಾಸವಾಗಿದ್ದರು. ಅಲ್ಲದೆ ಕಟ್ಟಡ ಸುಸ್ಥಿತಿಯಲ್ಲಿರಲಿಲ್ಲ. ಈ ಸಂಬಂಧ ಒಂದು ವರ್ಷಗಳ ಹಿಂದೆಯೇ ದೆಹಲಿ ಮಹಾನಗರ ಪಾಲಿಕೆಗೆ ದೂರು ನೀಡಲಾಗಿತ್ತು ಎಂದು ಕಟ್ಟಡದಲ್ಲಿ ಅಂಗಡಿ ಬಾಡಿಗೆ ಪಡೆದಿರುವ ಸುನಿಲ್ ಕುಮಾರ್ ಗುಪ್ತ ಅವರು ತಿಳಿಸಿದ್ದಾರೆ.