'ನಮೋ' ಎಫೆಕ್ಟ್; ಬಿಜೆಪಿ ಸೇರಿದ ಇಬ್ಬರು ಕೇರಳದ ಕೈಸ್ತ ಪಾದ್ರಿಗಳು!

ಕೇರಳ ಅಚ್ಚರಿಯ ನಡೆಗೆ ಕಾರಣವಾಗಿದ್ದು ಇಬ್ಬರು ಕೈಸ್ತ ಪಾದ್ರಿಗಳು ಬಿಜೆಪಿಯನ್ನು ಸೇರಿಕೊಂಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಟ್ಟಾಯಂ: ಕೇರಳ ಅಚ್ಚರಿಯ ನಡೆಗೆ ಕಾರಣವಾಗಿದ್ದು ಇಬ್ಬರು ಕೈಸ್ತ ಪಾದ್ರಿಗಳು ಬಿಜೆಪಿಯನ್ನು ಸೇರಿಕೊಂಡಿದ್ದಾರೆ. 
ಕೊಟ್ಟಾಯಂನ ಯಾಕೋಬಾ ಸಿರಿಯನ್ ಚರ್ಚ್ ಮತ್ತು ಡೀಕನ್ ಚರ್ಚ್ ಪಾದ್ರಿಗಳು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಫಾದರ್ ಜೀವರ್ಗೀಸ್ ಕಿಳಕ್ಕೆಡತ್, ಫಾದರ್ ಥಾಮಸ್ ಕುಶತಂಗಲ್, ಡೀಕನ್ ಆಂಡ್ರೂಸ್ ಮಂಗಲತ್ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಪಿಎಸ್ ಶ್ರೀಧರನ್ ಪಿಳ್ಳೈ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡರು. 
ಹಿಂದುತ್ವ ಸಿದ್ಧಾಂತದ ಮೇಲೆ ನಿಂತಿರುವ ಬಿಜೆಪಿಗೆ ಕ್ರೈಸ್ತ ಪಾದ್ರಿಗಳು ಸೇರ್ಪಡೆಯಾಗಿರುವುದು ಕೇರಳದಲ್ಲಿ ಹೊಸ ಸಂಚಲನ ಮೂಡಸಿದ್ದು ಇದು ಆರಂಭವಷ್ಟೇ ನೂರಾರು ಸಂಖ್ಯೆಯಲ್ಲಿ ಫಾದರ್ ಗಳು ಬಿಜೆಪಿ ಸೇರಲಿದ್ದಾರೆ ಎಂದು ಫಾದರ್ ಥಾಮಸ್ ಕುಶತುಂಗಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com