ಇನ್ನು ನಿನ್ನೆ ತಡರಾತ್ರಿ ಲಖನೌನಲ್ಲಿ ಕಾರಿನಲ್ಲಿ ತೆರಳುತ್ತಿ ಆ್ಯಪಲ್ ಉದ್ಯೋಗಿ ವಿವೇಕ್ ತಿವಾರಿ ಪೊಲೀಸ್ ಪೇದೆಗಳಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಬಳಿಕ ಪೊಲೀಸರು ಕಾರು ನಿಲ್ಲಿಸು ಎಂದು ಸೂಚನೆ ಕೊಟ್ಟರೂ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು. ಇದರಿಂದ ಶಂಕೆಗೊಂಡು ಪೊಲೀಸ್ ಪೇದೆ ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ವಿವೇಕ್ ತಿವಾರಿ ಕುತ್ತಿಗೆ ಬಳಿ ಗುಂಡು ತಗುಲಿದೆ. ಗುಂಡೇಟು ತಗುಲುತ್ತಿದ್ದಂತೆಯೇ ತಿವಾರಿ ಗಾಡಿ ಅಂಡರ್ ಪಾಸ್ ಗೋಡೆಗೆ ಢಿಕ್ಕಿ ಹೊಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದರು.