ಮೊಹಲ್ಲಾ ಕ್ಲಿನಿಕ್ ಗಳನ್ನು ತೆರೆದಿದ್ದೇವೆಂದು ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ, ಆ ಕ್ಲಿನಿಕ್ ಗಳು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ, ಹೃದಯಕ್ಕೆ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತವೆಯೇ? ಕೇಜ್ರಿವಾಲ್ ಮೊದಲು ಮೊಹಲ್ಲಾದಲ್ಲಿ ಚಿಕಿತ್ಸೆ ಪಡೆದುಕೊಂಡು ನೋಡಬೇಕು. ನಂತರವಷ್ಟೇ ಅವರಿಗೆ ನೈಜತೆ ತಿಳಿಯಲಿದೆ. 2019ರ ಚುನಾವಣೆಯಲ್ಲಿ ಜನತೆ ಕೇಜ್ರಿವಾಲ್ ಅವರಿಗೆ ಬುದ್ಧಿ ಕಲಿಸಲಿದೆ. ಆಗ ನೀವು ಇವಿಎಂ ನಲ್ಲಿ ದೋಷವಿದೆ ಎಂದು ದೂಷಿಸುವಂತಿಲ್ಲ ಎಂದು ಎಂದಿದ್ದಾರೆ.