ಜಾತಿ ಹೆಸರಲ್ಲಿ ಮತ, ಜನತೆಯ ಹಣ ಲೂಟಿ, ಇದು ಉತ್ತರ ಪ್ರದೇಶದ ಮೈತ್ರಿ ಮಂತ್ರ: ಪ್ರಧಾನಿ ನರೇಂದ್ರ ಮೋದಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರಚನೆಯಾಗಿರುವ ಎಸ್ ಪಿ-ಬಿಎಸ್ ಪಿ-ಆರ್ ಎಲ್ ಡಿ ಮೈತ್ರಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಜಾತಿ ಹೆಸರಲ್ಲಿ ಮತ, ಜನತೆಯ ಹಣ ಲೂಟಿ, ಇದು ಉತ್ತರ ಪ್ರದೇಶದ ಮೈತ್ರಿ ಮಂತ್ರ: ಪ್ರಧಾನಿ ನರೇಂದ್ರ ಮೋದಿ
ಜಾತಿ ಹೆಸರಲ್ಲಿ ಮತ, ಜನತೆಯ ಹಣ ಲೂಟಿ, ಇದು ಉತ್ತರ ಪ್ರದೇಶದ ಮೈತ್ರಿ ಮಂತ್ರ: ಪ್ರಧಾನಿ ನರೇಂದ್ರ ಮೋದಿ
Updated on
ಹಾರ್ದೋಯ್: ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರಚನೆಯಾಗಿರುವ ಎಸ್ ಪಿ-ಬಿಎಸ್ ಪಿ-ಆರ್ ಎಲ್ ಡಿ ಮೈತ್ರಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. 
ಜಾತಿಯ ಹೆಸರಿನಲ್ಲಿ ಮತ ಕೇಳಿ, ಜನತೆಯ ಹಣವನ್ನು ಲೂಟಿ ಮಾಡಿ ಎಂಬುದು ಉತ್ತರ ಪ್ರದೇಶ ಮಹಾಮೈತ್ರಿಯ ಉದ್ದೇಶವಾಗಿದೆ ಎಂದು ಮೋದಿ ಆರೋಪಿಸಿದ್ದಾರೆ. 
ಉತ್ತರ ಪ್ರದೇಶದಲ್ಲಿ ಹಾರ್ದೋಯ್ ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಂಬೇಡ್ಕರ್ ನ್ನು ವಿರೋಧಿಸಿದವರ ಹೆಸರಿನಲ್ಲಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮತಯಾಚನೆ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ಹೆಸರಿನಲ್ಲಿ ಮತ ಕೇಳುತ್ತಿರುವವರು  ಅವರ ಜೀವನದಿಂದ ಏನನ್ನೂ ಕಲಿತಿಲ್ಲ. ಅಂಬೇಡ್ಕರ್ ಗೆ ಅವಮಾನ ಮಾಡಿದವರ ಹೆಸರಿನಲಿ ಬೆಹನ್ ಜೀ ಮತಗಳನ್ನು ಕೇಳುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com