ಇನ್ನು ಈ ಹಿಂದೆ ಪುದುಚೇರಿ ಸಿಎಂ ಎನ್ ಎ ನಾರಾಯಣ ಸ್ವಾಮಿ ಹಾಗೂ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ನಡುವಿನ ಅಧಿಕಾರ ಕಿತ್ತಾಟ ತಾರಕ್ಕೇರಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನಾರಾಯಣಸ್ವಾಮಿ ಪುದುಚೇರಿ ರಾಜಭವನದ ಮುಂದೆ ತಮ್ಮ ಸಚಿವರು, ಶಾಸಕರೊಂದಿಗೆ ಪ್ರತಿಭಟನೆ ಕೂಡ ನಡೆಸಿದ್ದರು. ಈ ಕುರಿತಂತೆ ಮದ್ರಾಸ್ ಹೈಕೋರ್ಟ್ ನಲ್ಲಿ ಶಾಸಕ ಲಕ್ಷ್ಮೀ ನಾರಾಯಣ್ ಎಂಬುವವರು ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು.