ಜುಲೈ 1952 ರಲ್ಲಿ ಅಂದಿನ ನ್ಯಾಷನಲ್ ಕಾನ್ಪರೆನ್ಸ್ ನಾಯಕ ಶೇಖ್ ಅಬ್ದುಲ್ಲಾ( ಫಾರೂಕ್ ಅಬ್ದುಲ್ಲಾ ತಂದೆ, ಓಮರ್ ಅಬ್ದುಲ್ಲಾ ತಾತ) ಮತ್ತು ಆಗಿನ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ನಡುವೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಎಲ್ಲಾ ಕಾಶ್ಮೀರಿಗಳಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ. ರಾಜ್ಯದ ಜನರಿಗೆ ವಿಶೇಷ ಹಕ್ಕುಗಳನ್ನು ನೀಡಲು ಕಾನೂನುಗಳನ್ನು ರೂಪಿಸುವ ಅಧಿಕಾರ ವಿಧಾನಸಭೆಗೆ ನೀಡಲಾಗುತ್ತದೆ. ಈ ನಿಬಂಧನೆಯನ್ನು ಮೇ 14, 1954 ರಂದು ರಾಷ್ಟ್ರಪತಿ ಆದೇಶದ ಪ್ರಕಾರ 35 ಎ ವಿಧಿ ಅಡಿಯಲ್ಲಿ ಸೇರಿಸಲಾಯಿತು.