ತೆಲಂಗಾಣ; ಲೈಂಗಿಕತೆಗೆ ಸಹಕರಿಸದ್ದಕ್ಕೆ 10ನೇ ತರಗತಿ ಬಾಲಕಿಯನ್ನು ಕೊಂದ 'ಫೇಸ್ ಬುಕ್' ಗೆಳೆಯ

ಫೇಸ್ ಬುಕ್ ನಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದ 15 ವರ್ಷದ 10ನೇ ತರಗತಿಯ ಬಾಲಕಿಯನ್ನು ವೈ ನವೀನ್ ರೆಡ್ಡಿ ಎಂಬಾತ ಹತ್ಯೆ ಮಾಡಿರುವ ಘಟನೆ ಮಹಬೂಬ್ ನಗರ ಜಿಲ್ಲೆಯ ಶಂಕರಪಳ್ಳಿ ತಾಂಡಾದಲ್ಲಿ ನಡೆದಿದೆ. 
ಬಾಲಕಿಯ ಹತ್ಯೆ ಖಂಡಿಸಿ ಮಹಿಳೆಯರಿಂದ ಮೋಂಬತ್ತಿ ಪ್ರತಿಭಟನೆ
ಬಾಲಕಿಯ ಹತ್ಯೆ ಖಂಡಿಸಿ ಮಹಿಳೆಯರಿಂದ ಮೋಂಬತ್ತಿ ಪ್ರತಿಭಟನೆ
Updated on

ಮಹಬೂಬ್ ನಗರ(ತೆಲಂಗಾಣ): ಫೇಸ್ ಬುಕ್ ನಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದ 15 ವರ್ಷದ 10ನೇ ತರಗತಿಯ ಬಾಲಕಿಯನ್ನು ವೈ. ನವೀನ್ ರೆಡ್ಡಿ ಎಂಬಾತ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯ ಶಂಕರಪಳ್ಳಿ ತಾಂಡಾದಲ್ಲಿ ನಡೆದಿದೆ.


ಬಾಲಕಿ ಹರ್ಷಿಣಿಯ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಆಕೆಯ ಶವ ಸಿಕ್ಕಿದೆ. ಲೈಂಗಿಕ ಬಯಕೆಯನ್ನು ಹರ್ಷಿಣಿ ಪೂರೈಸಲಿಲ್ಲ ಎಂಬ ಕಾರಣಕ್ಕೆ ನವೀನ್ ಹತ್ಯೆ ಮಾಡಿದ್ದಾನೆ.


ನಡೆದ ಘಟನೆಯೇನು?: 28 ವರ್ಷದ ಕೊಹೆಡಾ ಗ್ರಾಮದ ನವೀನ್ ರೆಡ್ಡಿ ಹೈದರಾಬಾದ್ ನಲ್ಲಿ ವರ್ಕ್ ಶಾಪ್ ನಡೆಸುತ್ತಿದ್ದ. ಫೇಸ್ ಬುಕ್ ನಲ್ಲಿ ಇಬ್ಬರೂ ಪರಿಚಯವಾದರು, ಹರ್ಷಿಣಿ ಹೆಸರನ್ನು ಅನ್ವಿಕ ಅನ್ವಿ ಎಂದು ಮತ್ತು ನವೀನ್ ಬನ್ನಿ ರೆಡ್ಡಿ ಎಂದು ಫೇಸ್ ಬುಕ್ ನಲ್ಲಿ ನಕಲಿ ಹೆಸರು ಇಟ್ಟುಕೊಂಡಿದ್ದರು. ಪರಿಚಯ ಸ್ನೇಹವಾಗಿ ಬೆಳೆಯಿತು, ಫೋನ್ ನಲ್ಲಿಯೂ ಮಾತನಾಡಿಕೊಳ್ಳುತ್ತಿದ್ದರು. ದಿನಗಳು ಕಳೆಯುತ್ತಾ ಹೋದಂತೆ ನವೀನ್ ಹರ್ಷಿಣಿಗೆ ಲೈಂಗಿಕತೆಗೆ ಒತ್ತಾಯಿಸುತ್ತಾನೆ. ಆಕೆ ನಿರಾಕರಿಸಿದಾಗ ಕಿರುಕುಳ ನೀಡಲು ಆರಂಭಿಸುತ್ತಾನೆ. 


ಒಂದು ದಿನ ಮನೆಯಿಂದ ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡ ಹೋದ ನವೀನ್ ಹರ್ಷಿಣಿ ಮೇಲೆ ಹಲ್ಲೆ ಮಾಡಿ ತಲೆಯನ್ನು ಬಂಡೆಕಲ್ಲಿಗೆ ಹೊಡೆದು ಕೊಂದಿದ್ದಾನೆ.


ಹರ್ಷಿಣಿಯ ಪೋಷಕರು ಜಡ್ ಚೆರ್ಲಾ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದರು, ಪೊಲೀಸರು ತನಿಖೆ ಕೈಗೊಂಡಾಗ ಹರ್ಷಿಣಿ ನವೀನ್ ರೆಡ್ಡಿ ಜೊತೆ ಸ್ನೇಹ ಹೊಂದಿದ್ದದ್ದು ಬೆಳಕಿಗೆ ಬಂದಿತು. ಕಳೆದ ಬುಧವಾರ ರಾತ್ರಿ ಪೊಲೀಸರು ಹಯತ್ ನಗರ್ ನಲ್ಲಿ ನವೀನ್ ನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. 


ವಿಚಾರಣೆ ವೇಳೆ ಹರ್ಷಿಣಿಯನ್ನು ಕೊಲೆ ಮಾಡಿರುವುದಾಗಿ ನವೀನ್ ರೆಡ್ಡಿ ಒಪ್ಪಿಕೊಂಡನು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com