ಮದುವೆ ಆಮಿಷವೊಡ್ಡಿ 2 ತಿಂಗಳು ಲೈಂಗಿಕ ಗುಲಾಮಗಿರಿಯಲ್ಲಿರಿಸಿದ! ಉನ್ನಾವೋ ಸಂತ್ರಸ್ಥೆಯಿಂದ ಆಘಾತಕಾರಿ ಮಾಹಿತಿ

 ಆಕೆಗೆ ಪ್ರೀತಿಸುವುದಾಗಿ ಹೇಳಿ ವಂಚಿಸಲಾಗಿತ್ತು.  ಅವಳನ್ನು ಲೈಂಗಿಕ ಗುಲಾಮಳನ್ನಾಗಿ ಮಾಡಿ ಸೆರೆಯಲ್ಲಿಟ್ಟಿದ್ದಲ್ಲದೆ  ಪದೇ ಪದೇ ಅತ್ಯಾಚಾರಕ್ಕೊಳಗಾದ ನಂತರ, ಆಕೆಯ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂಬ ಬೆದರಿಕೆಯೊಂದಿಗೆ ಆಕೆಯನ್ನು ಹೊರಗಟ್ಟಲಾಗಿದೆ- ಇದು ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಹೇಳಿಕೆಯಲ್ಲಿ ವಿವರಿಸಿದ ಸತ್ಯ!.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಲಖನೌ: ಆಕೆಗೆ ಪ್ರೀತಿಸುವುದಾಗಿ ಹೇಳಿ ವಂಚಿಸಲಾಗಿತ್ತು.  ಅವಳನ್ನು ಲೈಂಗಿಕ ಗುಲಾಮಳನ್ನಾಗಿ ಮಾಡಿ ಸೆರೆಯಲ್ಲಿಟ್ಟಿದ್ದಲ್ಲದೆ  ಪದೇ ಪದೇ ಅತ್ಯಾಚಾರಕ್ಕೊಳಗಾದ ನಂತರ, ಆಕೆಯ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂಬ ಬೆದರಿಕೆಯೊಂದಿಗೆ ಆಕೆಯನ್ನು ಹೊರಗಟ್ಟಲಾಗಿದೆ- ಇದು ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಹೇಳಿಕೆಯಲ್ಲಿ ವಿವರಿಸಿದ ಸತ್ಯ!.

ಶೇಕಡಾ 90 ರಷ್ಟು ಸುಟ್ಟಗಾಯಗಳೊಡನೆ ಬದುಕುಳಿದ ಸಂತ್ರಸ್ಥೆಯು ತನ್ನನ್ನು ಶ್ರೀಮಂತ ಕುಟುಂಬದಿಂದ ಬಂದ ಶಿವಂ ತ್ರಿವೇದಿ  ಪ್ರೀತಿಯ ಹೆಸರು ಹೇಳಿ ಅತ್ಯಾಚಾರ ಮಾಡಿದ್ದಾಗಿ ಆರೋಪಿಸಿದ್ದಾಳೆ. 

2018 ರಲ್ಲಿ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ, ಶಿವಂ ಅವರು ಮದುವೆಯ ಪ್ರಸ್ತಾವನೆ ಮಾಡಿದ್ದಾಗಿ ಆತ ತನ್ನ ಸೋದರ ಶುಭಮ್ ಸಮ್ಮುಖದಲ್ಲಿ ತನ್ನನ್ನು ವಿವಾಹವಾಗುವುದಾಗಿ ವಾಗ್ದಾನದೊಂದಿಗೆ ಉನ್ನಾವೊ ನಗರದಲ್ಲಿರುವ ಹಿಂದೂ  ದೇವಸ್ಥಾನಕ್ಕೆ ಕರೆದೊಯ್ದಿದ್ದು ಅಲ್ಲಿ ಆಕೆಯ ಮೇಲೆ ಗನ್ ಪಾಯಿಂಟ್ ಅಡಿಯಲ್ಲಿ ಅತ್ಯಾಚಾರ ನಡೆಸಿದ್ದನು..

ಬಡ ರೈತನ ಪುತ್ರಿಯಾಗಿರುವ ಸಂತ್ರಸ್ಥೆ ಆಕೆಯ ತಂದೆಯ ಏಳು ಜನ ಮಕ್ಕಳಲ್ಲಿ ಕಿರಿಯಳಾಗಿದ್ದಾಳೆ., ಅವಳು ಶಿವಂನನ್ನು ನಂಬಿದ್ದಳು. ಅವನೊಂದಿಗೆ ರಾಯ್ ಬರೇಲಿಯ ಲಾಲ್ಗುಂಜ್ ಗೆ ತೆರಳಿದ್ದಳು.ಅಲ್ಲಿ ಅವನು ಅವಳನ್ನು ಮದುವೆಯಾಗಲು ಯೋಜಿಸಿದನು. ಮದುವೆ ಯೋಜನೆಗಳೊಂದಿಗೆ ಮುಂದುವರಿಯುವ ಬದಲು, ಶಿವಂ ಅವಳ ಮೇಲೆ ಅತ್ಯಾಚಾರ ಎಸಗಿದ್ದು ಕೃತ್ಯದ ವಿಡಿಯೋ ರೆಕಾರ್ಡ್ ಆಗಿತ್ತು. ಸುಮಾರು ಎರಡು ತಿಂಗಳ ಕಾಲ ಆಕೆಯನ್ನು ಶಿವಂ ರಾಯ್ ಬರೇಲಿಯ ಬಾಡಿಗೆ ಕೋಣೆಯಲ್ಲಿ ಇಟ್ಟುಕೊಂಡು ಅವಳ ಮೇಲೆ ನಿಗಾಇರಿಸಿದ್ದನು.ಅವಳು ಎಂದಾದರೂ ಹೊರಬರುವ ಧೈರ್ಯ ಮಾಡಿದ್ದರೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.ಅಲ್ಲದೆ ಆಕೆಯ ವಾಸಸ್ಥಳವನ್ನು ಆಗಾಗ ಬದಲಿಸುತ್ತಿದ್ದ.

ಎಫ್‌ಐಆರ್ ಪ್ರಕಾರ, ಅವಳು ಜನವರಿ 19, 2018 ರಂದು ಶಿವಂ ಅವನನ್ನು ಕಂಡು ಆತನ ಭರವಸೆಯಂತೆ ಅವಳನ್ನು ಮದುವೆಯಾಗುವಂತೆ ಕೇಳಿಕೊಂಡಳು. ಶಿವಂ ಅವಳನ್ನು ರಾಯ್ ಬರೇಲಿ ನ್ಯಾಯಾಲಯಕ್ಕೆ ಕರೆದೊಯ್ದು ಮದುವೆ ಒಪ್ಪಂದವನ್ನು ಸಿದ್ಧಪಡಿಸಿದನು ಆದರೆ ಶೀಘ್ರದಲ್ಲೇ ಅವಳನ್ನು ಮದುವೆಯಾಗುವ ನೆಪದಲ್ಲಿ ಅವಳನ್ನು ಮತ್ತೆ ತನ್ನ ಹಳ್ಳಿಗೆ ಕರೆದೊಯ್ದನು.

ಎಫ್ಐಆರ್ ಪ್ರಕಾರ, ರಾಯ್ ಬರೇಲಿಯ ಕೋಣೆಯಲ್ಲಿದ್ದ ವೇಳೆ ಆಕೆಗೆ ಮನೆಯ ಕಿಂಡಿಯಿಂದಲೂ ಹೊರಗಿಣುಕಲು ಅವಕಾಶ ನೀಡಿರಲಿಲ್ಲ. ಆದರೆ ಸಂತ್ರಸ್ಥೆಯು ಅಂತಿಮವಾಗಿ ಶಿವಂ ಒಡ್ಡಿದ್ದ ಎಲ್ಲಾ ಜೀವ ಬೆದರಿಕೆಗಳನ್ನು ಕಡೆಗಣಿಸಿ ಎರಡು ಎಫ್‌ಐಆರ್‌ಗಳನ್ನು ಸಲ್ಲಿಸಿದಳು - ಮೊದಲನೆಯದು ಮಾರ್ಚ್ 5 ರಂದು ಬಿಹಾರ ಬಹತಾ ಪೊಲೀಸರಿಗೆ (ಉನ್ನಾವೊ) ಮತ್ತು ಮರುದಿನ ಲಾಲ್‌ಗುಂಜ್ (ರಾಯ್ ಬರೇಲಿ) ಪೋಲೀಸರಿಗೆ ನೀಡಿದ್ದಾಗಿದೆ. ., 

ಅವಳು ಮನೆಯಿಂದ ಹೊರಗೆ ನೋಡಿದಾಗ, ಅವಳನ್ನು ಥಳಿಸಿ ಮತ್ತೆ ಅತ್ಯಾಚಾರ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.ಲಖನೌ  ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಅವರು ನೀಡಿದ ದೂರಿನ ಪಠ್ಯವೂ ಇದನ್ನೇ ಹೇಳುತ್ತದೆ. ಅಲ್ಲದೆ ಸಂತ್ರಸ್ಥೆಯು ರಾಯ್ ಬರೇಲಿ ಪೊಲೀಸರನ್ನು ಸಂಪರ್ಕಿಸಿದಾಗ, ದೂರು ನೀಡಲು ಅನುಮತಿ ನೀಡದೆ ಕಳುಹಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾಳೆ.

ನ್ಯಾಯಾಲಯದ ಹಸ್ತಕ್ಷೇಪದ ನಂತರವೇ, ಐಪಿಸಿಯ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಮೊದಲು ಮಾರ್ಚ್ 5, 2019 ರಂದು ಬಿಹಾರ ಬಹತ ಪೊಲೀಸ್ ಠಾಣೆಯಲ್ಲಿ ಮತ್ತು ನಂತರ ಮಾರ್ಚ್ 6 ರಂದು ಲಾಲ್ಗುಂಜ್ ನಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಗುರುವಾರ ನಡೆದ ಘಟನೆಯ ನಂತರ ಉಪವಿಭಾಗದ ಮ್ಯಾಜಿಸ್ಟ್ರೇಟ್‌ಗೆ ನೀಡಿದ ಹೇಳಿಕೆಯಲ್ಲಿ  ಸಂತ್ರಸ್ತೆ ತನ್ನ ವಯಸ್ಸನ್ನು 30 ವರ್ಷ ಎಂದು ಬಹಿರಂಗಪಡಿಸಿದ್ದಾರೆ.

ಎಡಿಜಿ ಲಕ್ನೋ, ಎಸ್ಎನ್ ಸಬತ್, ಬಲಿಪಶು ಸಲ್ಲಿಸಿದ ಎಫ್ಐಆರ್ಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ, ಮುಖ್ಯ ಆರೋಪಿ ಶಿವಮ್ ಸೆಪ್ಟೆಂಬರ್ ನಲ್ಲಿ ಶರಣಾಗಿದ್ದಾನೆ. ಆತನನ್ನು ಜೈಲಿಗಟ್ಟಲಾಗಿದೆ.ಆದರೆ ಶುಭಂ ತಲೆಮರೆಸಿಕೊಂಡಿದ್ದಾನೆ.ಇನ್ನೊಂದೆಡೆ ನವೆಂಬರ್ 30 ರಂದು ಶಿವಂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com