ಪೌರತ್ವ ಮಸೂದೆ: 'ಸುಪ್ರೀಂ'ಗೆ ದೂರು ನೀಡಲು ವಿಪಕ್ಷಗಳ ಚಿಂತನೆ
ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ 9 ಗಂಟೆ ಧೀರ್ಘ ಚರ್ಚೆಯ ನಂತರ ಪೌರತ್ವ (ತಿದ್ದುಪಡಿ) ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.
ಆಯ್ಕೆ ಸಮಿತಿಗೆ ಕಳುಹಿಸಲು ಪ್ರತಿಪಕ್ಷಗಳು ಕೈಗೊಂಡ ನಿರ್ಣಯವನ್ನು ಸದನ ತಿರಸ್ಕರಿಸಿದ ಬಳಿಕ ಮಸೂದೆಯನ್ನು ಕಾನೂನಾಗಿ ಮಾರ್ಪಾಡಿಸಲಾಗಿದ್ದು, ಮಸೂದೆಯನ್ನು ನ್ಯಾಯಾಂಗ ಪರಿಶೀಲನೆಗೆ ಒಪ್ಪಿಸದ ಸರ್ಕಾರದ ನಿಲುವನ್ನು ವಿರೋಧಿಸಿ ಸುಪ್ರೀಂಕೋರ್ಟಿಗೆ ದೂರು ಸಲ್ಲಿಸಲು ಪ್ರತಿಪಕ್ಷಗಳು ಚಿಂತನೆ ನಡೆಸಿವೆ.
ಅಸ್ಸಾಂ ಹಾಗೂ ಈಶಾನ್ಯ ಭಾಗದಲ್ಲಿ ತೀವ್ರ ಪ್ರತಿಭಟನೆಯ ನಡುವೆಯೂ 125 ಮತಗಳ ಬೆಂಬಲದೊಂದಿಗೆ ಪೌರತ್ವ ಪೌರತ್ವ ಮಸೂದೆ ಅಂಗೀಕಾರಗೊಂಡಿತ್ತು.ರಾಜ್ಯಸಭೆಯಲ್ಲಿ ಕೇಂದ್ರಸರ್ಕಾರ ಬಹುಮತದ ಕೊರತೆ ಅನುಭವಿಸುತ್ತಿದ್ದರೂ ವೈಎಸ್ ಆರ್ ಕಾಂಗ್ರೆಸ್, ಟಿಡಿಪಿ ಹಾಗೂ ಬಿಜೆಡಿಯ ಬೆಂಬಲದಿಂದ ಮಸೂದೆ ಅನುಮೋದನೆ ಪಡೆದುಕೊಂಡಿತು. ಶಿವಸೇನೆ ಮತದಾನದ ಸಂದರ್ಭ ಸಭಾತ್ಯಾಗ ನಡೆಸಿತು.
ಇದೊಂದು ಕರಾಳ ರಾತ್ರಿ ಎಂದು ಪ್ರತಿಪಕ್ಷಗಳು ಪ್ರತಿಪಾದಿಸಿದರೆ, ನಾವು ಆರು ಧರ್ಮಗಳನ್ನು ಒಳಗೊಂಡಿದೇವೆ. ಮೆಚ್ಚುಗೆ ಏನೂ ಇಲ್ಲ. ಮುಸ್ಲಿಂರತ್ತ ಮಾತ್ರ ಗಮನ ಹರಿಸಲಾಗಿದೆ.ಪಾಕಿಸ್ತಾನ, ಬಾಂಗ್ಲಾದೇಶ, ಅಘ್ಪಾನಿಸ್ತಾನಗಳಲ್ಲಿ ಮುಸ್ಲಿಂರು ಅಲ್ಪಸಂಖ್ಯಾತರಾ? ಮುಸ್ಲಿಂರು ಇದ್ದರೆ ಮಾತ್ರ ಜಾತ್ಯತೀತನಾ? ಕಳೆದ ಐದು ವರ್ಷಗಳಲ್ಲಿ ಸುಮಾರು 500 ಮುಸ್ಲಿಂರು ಭಾರತದ ಪೌರತ್ವ ಪಡೆದುಕೊಂಡದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಗೆ ತಿಳಿಸಿದರು.
ಪೌರತ್ವ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದರೆ, ನಾಜಿ ಜರ್ಮನಿ ರೀತಿಯಲ್ಲಿ ಮಸೂದೆಯನ್ನು ಕಾನೂನಾಗಿ ಮಾರ್ಪಡಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೇರಿಕ್ ಓ ಬ್ರಿಯಾನ್ ಟೀಕಿಸಿದರು. ಮುಸ್ಲಿಂರು ಭಯಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ. ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಪ್ರಸ್ತಾವಕ್ಕೆ ವಿರೋಧವಾಗಿದೆ ಎಂದು ಬಿಎಸ್ಪಿಯ ಸಂಸದ ಎಸ್. ಸಿ. ಮಿಶ್ರಾ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ