ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರಂನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಪುರಾತನ ಪ್ರಸಿದ್ಧ ಶ್ರೀ ಅಗಸ್ಥೇಶ್ವರ ಸ್ವಾಮಿ ದೇಗುಲದ ಅವರಣದಲ್ಲಿದ್ದ ಬೃಹತ್ ನಂದಿ ವಿಗ್ರಹವನ್ನು ಖದೀಮರ ಕದ್ದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಸುಮಾರು 15 ಮಂದಿಯ ಖತರ್ನಾಕ್ ಕದೀಮರ ಗ್ಯಾಂಗ್ ಸಂಚು ರೂಪಿಸಿ ಸುಮಾರು 1 ಸಾವಿರ ಕೆಜಿ ತೂಕದ ನಂದಿ ವಿಗ್ರಹವನ್ನು ಕದ್ದಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಎಲ್ಲ 15 ಮಂದಿ ಕಳ್ಳರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.