ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು, ರಾಫೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಾಕಷ್ಟು ತಪ್ಪು ನಿರ್ಣಯಗಳನ್ನು ಕೈಗೊಂಡಿದ್ದು, 126 ಯುದ್ಧ ವಿಮಾನಗಳಿಗೆ ತಗುಲುವ ವೆಚ್ಚವನ್ನು ಕೇವಲ 36 ವಿಮಾನಗಳಿಗೆ ನೀಡಿ ಡಸ್ಸಾಲ್ಟ್ ಸಂಸ್ಛೆಗೆ ಆಜೀವ ಪರ್ಯಂತ ಲಾಭ ನೀಡಿದೆ. ಅಲ್ಲದೆ ಪ್ರಧಾನಿ ಕಚೇರಿ ಫ್ರಾನ್ಸ್ ಮೂಲದ ಡಸ್ಸಾಲ್ಟ್ ಏವಿಯೇಷನ್ ನೊಂದಿಗೆ ಖಾಸಗಿ ಚರ್ಚೆ ಗಳನ್ನು ನಡೆಸಿದ್ದು, ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳೂ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಕೈ ಬಿಡಲಾಗಿದೆ.