ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಕೆ ಸಿಂಗ್ ಅವರು, ಕಾಶ್ಮೀರ ಸಮಸ್ಯೆ ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ. ಕಾಶ್ಮೀರದಲ್ಲಿ ಅಘೋಷಿತ ಪ್ರಾಕ್ಸಿ ಯುದ್ಧ ಚಾಲ್ತಿಯಲ್ಲಿದ್ದು, ಕೇವಲ ಒಂದೆರಡು ಘಟನೆಗಳಿಂದ ಯಾವುದೇ ಕಾರಣಕ್ಕೂ ಯಶಸ್ಸು ಮತ್ತು ವೈಫಲ್ಯದ ಕುರಿತು ನಿರ್ಧರಿಸಬಾರದು. ಹೌದು ಎನ್`ಕೌಂಟರ್ ನಲ್ಲಿ ನಮ್ಮ ಮೂವರು ಯೋಧರು ವೀರ ಮರಣವನ್ನಪ್ಪಿದ್ದಾರೆ. ಅಷ್ಟು ಮಾತ್ರಕ್ಕೇ ಅಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಸೇನೆಯ ನಿಯಂತ್ರಣದಲ್ಲಿಲ್ಲ ಎಂದಲ್ಲ ಎಂದು ಹೇಳಿದರು.