ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿವೃತ್ತ ಸೇನಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ನಮಗೆ ಅಗತ್ಯವಿರುವುದು ಪ್ರಧಾನಿ ಮೇಲೆ ನಿಮ್ಮ ನಂಬಿಕೆ. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿದೆ’ ಎಂದು ಹೇಳಿದರು. ಅಂತೆಯೇ ಸ್ಮಾರಕದ ಕುರಿತು ಮಾತನಾಡಿಗ ನಿರ್ಮಲಾ ಸೀತಾರಾಮನ್, ಇಂತಹ ಅದ್ಭುತ ಸ್ಮಾರಕ ಲೋಕಾರ್ಪಣೆಯಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಸ್ಮಾರಕದ ಮೂಲಕ ದೇಶಕ್ಕೆ ಮತ್ತೊಂದು ಯಾತ್ರಾತಾಣ ಸಿಕ್ಕಂತಾಗಿದೆ. ದೇಶಕ್ಕಾಗಿ 1962 ಇಂಡೋ-ಚೈನಾ ಯುದ್ಧ, 1947ರ ಇಂಡೋ-ಪಾಕ್ ಯುದ್ಧ, ಶ್ರೀಲಂಕಾದಲ್ಲಿ 1965 ಮತ್ತು 1971 ಶಾಂತಿ ಪಾಲನಾಪಡೆಯಲ್ಲಿದ್ದ ಭಾರತೀಯ ಪಡೆಗಳ ಮೇಲಿನ ದಾಳಿ ಮತ್ತು ಕಾರ್ಗಿಲ್ ಯುದ್ಝದ ವೇಳೆ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲು ಈ ಅದ್ಭುತ ಸ್ಮಾರಕ ನಿರ್ಮಾಣವಾಗಿದೆ ಎಂದು ಹೇಳಿದರು.