ಇಂದು ಬೆಳಗಿನ ಜಾವ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಶ್ರೀನಗರದಲ್ಲಿ 7 ಕಡೆ ದಾಳಿಗೆ ಇಳಿದಿತ್ತು. ಉಗ್ರರಿಗೆ ನೆರವಾಗುತ್ತಿದ್ದಾರೆ ಎಂದು ಪ್ರತ್ಯೇಕತಾವಾದಿಗಳಾದ ಯಾಸಿನ್ ಮಲಿಕ್, ಶಬೀರ್ ಶಾ, ಮಿರ್ವೈಜ್ ಉಮರ್ ಫಾರೂಕ್, ಮೊಹಮದ್ ಅಶ್ರಫ್ ಖಾನ್, ಮಸರತ್ ಅಲಂ, ಜಫರ್ ಅಕ್ಬರ್ ಭಟ್, ನಸೀಂ ಗೀಲಾನಿ ಅವರ ನಿವಾಸಗಳ ಮೇಲೆ NIA ಅಧಿಕಾರಿಗಳ ತಂಡ ಭಾರೀ ಶೋಧ ಕಾರ್ಯ ನಡೆಸಿತು.