ವಂದೇ ಮಾತರಂ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುವುದು ತಪ್ಪು: ಕಮಲ್ ನಾಥ್

ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಗೆ ಶೀಘ್ರವೇ ಹೊಸ ಲುಕ್ ನೀಡಲಾಗುವುದು, ಈ ಸಂಬಂಧ ಆದಷ್ಟು ಬೇಗ ಅಧಿಕೃತ ಪ್ರಕಟಣೆ ....
ಕಮಲ್ ನಾಥ್
ಕಮಲ್ ನಾಥ್
ಭೂಪಾಲ್:  ಪ್ರತಿ ತಿಂಗಳ ಮೊದಲ ಕಾರ್ಯನಿರ್ವಹಣೆ ದಿನದಂದು ಸಚಿವಾಲಯಗಳಲ್ಲಿ ವಂದೇ ಮಾತರಂ ಹಾಡುವುದಕ್ಕೆ ಬ್ರೇಕ್ ಹಾಕಿದ ಮಧ್ಯ ಪ್ರದೇಶ ಸರ್ಕಾರದ ನಡೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. 
ಈ ಸಂಬಂಧ ಪ್ರತಿಕ್ರಿಯಿಸಿರುವ ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್, ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಗೆ ಶೀಘ್ರವೇ ಹೊಸ ಲುಕ್ ನೀಡಲಾಗುವುದು, ಈ ಸಂಬಂಧ ಆದಷ್ಟು ಬೇಗ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು  ಹೇಳಿದ್ದಾರೆ.
ವಂದೇ ಮಾತರಂ ಗೀತೆ ವಿಷಯವನ್ನು ರಾಜಕೀಯಗೊಳಿಸುವುದು ತಪ್ಪು,  ರಾಮ ಮಂದಿರ ಮತ್ತು ವಂದೇ ಮಾತರಂ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ, ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ,
ಈ ಹಿಂದೆ ಮದ್ಯ ಪ್ರದೇಶದಲ್ಲಿ ಬಿಜೆಪಿ  ಸರ್ಕಾರ ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಗೀತೆ ವಂಂದೆ ಮಾತರಂ ಹಾಡುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿತ್ತು, ಅದಕ್ಕೆ ಮಂಗಳವಾರ ಸಿಎಂ ಕಮಲ್ ನಾಥ್ ಬ್ರೇಕ್ ಹಾಕಿ್ದರು  .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com