ಅಸ್ಸಾಂ ನ ಸಿಲ್ಚಾರ್ ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಎನ್ ಆರ್ ಸಿ ಬಗ್ಗೆ ಮಾತನಾಡಿದ್ದು, ಎನ್ ಆರ್ ಜಿ ಜಾರಿಯ ವಿಷಯದಲ್ಲಿ ಹಲವು ಜನರು ಸಮಸ್ಯೆ ಎದುರಿಸಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಎನ್ಆರ್ ಸಿ ಪಟ್ಟಿಯಿಂದ ಯಾವುದೇ ಭಾರತೀಯ ಪ್ರಜೆಯ ಹೆಸರೂ ಹೊರಗುಳಿಯುವುದಕ್ಕೆ ಬಿಡುವುದಿಲ್ಲ ಎಂದೂ ಹೇಳಿದ್ದಾರೆ.