ನವದೆಹಲಿ: ತ್ಯಾಗಿಯೂ ಅಲ್ಲದ, ಜ್ಞಾನಿಯೂ ಅಲ್ಲದ ರಾಹುಲ್ ಗಾಂಧಿ ಬ್ರಾಹ್ಮಣ ಹೇಗಾಗುತ್ತಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣನಾದವನಿಗೆ ಉಪನಯನ ಆಗಿರಬೇಕಾಗುತ್ತದೆ. ಆಗ ಮಾತ್ರ ದ್ವಿಜ ಎನಿಸಿಕೊಳ್ಳುತ್ತಾನೆ. ಬ್ರಾಹ್ಮಣ ಏಕಾಏಕಿ ಆಗಲು ಸಾಧ್ಯವಿಲ್ಲ
ಬ್ರಾಹ್ಮಣನಾದವನು ಜ್ಞಾನಿಯೂ , ತ್ಯಾಗಿಯೂ ಆಗಿರಬೇಕಾಗುತ್ತದೆ. ರಾಹುಲ್ ಜ್ಞಾನಿ ಅಲ್ಲ, ತ್ಯಾಗಿಯೂ ಅಲ್ಲ ಇನ್ನು ಬ್ರಾಹ್ಮಣ ಹೇಗಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಹಿಂದೂ ಧರ್ಮವನ್ನು ತಮಾಷೆಯಾಗಿ ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ನಾನು ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ದೇವಾಲಯದಲ್ಲಿ ಸಂಕಲ್ಪ ಪೂಜೆ ವೇಳೆ ಹೇಳಿಕೊಂಡ ಬಳಿಕ ಸಾಕಷ್ಟು ಚರ್ಚಗೆ ಕಾರಣವಾಗಿತ್ತು.