ಚೆನ್ನೈ ಸಮೀಪ ನಡೆದಿದ್ದ ಈ ಅಪಘಾತದ ವಿವರ ತಿಳಿಯದ ಲಾರಿಯ ಚಾಲಕ ಬರೋಬ್ಬರಿ 400 ಕಿಮೀ ದೂರದ ಕರ್ನೂಲ್ ಗೆ ಬಂದು ನೋಡಿದಾಗ ಬೆಳಕು ಕಂಡಿದೆ. ಗುರುವಾರ ರಾತ್ರಿ ಚೆನ್ನೈ-ತಿರುಪತಿ ಹೆದ್ದಾರಿಯ ಪಂಡೂರ್ ಎಂಬಲ್ಲಿ ಈ ಅಪಘಾತ ನಡೆದಿತ್ತು. ಆವೇಳೆ ಬೈಕ್ ಸವಾರ ಕಾರ್ ಗುದ್ದಿದ ರಭಸಕ್ಕೆ ಎದುರಿನಿಂದ ಬರುತ್ತಿದ್ದ ಲಾರಿಯೊಳಕ್ಕೆ ಬಿದ್ದಿದ್ದಾನೆ. ಆದರೆ ಲಾರಿ ಚಾಲಕನಿಗೆ ಈ ಅಪಘಾತದ ಬಗ್ಗೆ ಮಾಹಿತಿಯೇ ಇರಲಿಲ್ಲ! ಆತ ಲಾರಿಯನ್ನು ಕರ್ನೂಲ್ ಗೆ ತಂದ ನಂತರ ಲಾರಿಯಲ್ಲಿ ಮೃತದೇಹವಿರುವುದು ಕಂಡು ಆಘಾತಗೊಂಡಿದ್ದಾನೆ. ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿ ದ್ದು ಪೋಲೀಸರು ಯುವಕನ ಶವವನ್ನು ವಶಕ್ಕೆ ಪಡೆದರು.