ದೆಹಲಿ ಸಚಿವ ಗೋಪಾಲ್ ರೈ ಜೊತೆ ಶ್ರೀ ಕೃಷ್ಣ ಗೋಶಾಲೆ ಗೆ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದರು, ದೆಹಲಿ ಸರ್ಕಾರ ಮತ್ತು ಮುನಿಸಿಪಲ್ ಕಾರ್ಪೋರೇಷನ್ ನೀಡುತ್ತಿರುವ ಅನುದಾನದಲ್ಲಿ ಈ ಗೋಶಾಲೆ ನಡೆಸಲಾಗುತ್ತಿದೆ, ಈ ವೇಳೆ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಎಂದಿಗೂ ಹಸುಗಳ ಹೆಸರಿನಲ್ಲಿ ಮತ ಕೇಳುವುದಿಲ್ಲ ಎಂದು ಹೇಳಿದ್ದಾರೆ.