ಪ್ರಸ್ತುತ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರ ರಾವ್ ಸಿಬಿಐ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಸಿಬಿಐ ನಂತಹಾ ಮಹತ್ವದ ಸಂಸ್ಥೆಗೆ ತಕ್ಷಣ ಖಾಯಂ ಮುಖ್ಯಸ್ಥರ ನೇಮಕ ಂಆಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಅಲ್ಲದೆ ಇತ್ತೀಚೆಗೆ ನಡೆದ ಆಯ್ಕೆ ಸಮಿತಿ ಸಭೆಯಲ್ಲಿನ ತೀರ್ಮಾನ, ಹಾಗೂ ನಾಗೇಶ್ವರರಾವ್ ನೇಮಕ "ಕಾನೂನುಬಾಹಿರ" ಎಂದು ಖರ್ಗೆ ಪ್ರಧಾನಿಗೆ ಪತ್ರ ಬರೆದು ವಿವರಿಸಿದ್ದಾರೆ.