ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕುಟುಂಬ ಸದಸ್ಯರುಗಳೇ ಕೆರೆಗೆ ಬಿಸಾಕಿರುವ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸ್ವಯಂ ಘೋಷಿತ ದೇವಮಾನವನ ಸಲಹೆ ಮೇರೆಗೆ ಕುಟುಂಬ ಸದಸ್ಯರೇ ಮಗುವನ್ನು ಕೆರೆಗೆ ಬಿಸಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಲಹೆ ನೀಡಿದ ಸ್ವಯಂ ಘೋಷಿತ ದೇವ ಮಾನವ, ಓರ್ವ ಮಹಿಳೆ, ಹಾಗೂ ಮಗುವಿನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆಗಷ್ಟೇ ಹುಟ್ಟಿದ ಹೆಣ್ಣುಮಗುವನ್ನು ದುಷ್ಟ ಶಕ್ತಿಗಳು ಆವರಿಸಿವೆ ಆದ್ದರಿಂದ ಅದನ್ನು ಕೆರೆಗೆ ಹಾಕಿ ಎಂದು ಸ್ವಯಂ ಘೋಷಿತ ದೇವಮಾನವ ಸಲಹೆ ನೀಡಿದ್ದ ಅದರಂತೆಯೇ ಮಗುವನ್ನು ಕೆರೆಗೆ ಎಸೆಯಲಾಗಿದೆ ಎಂದು ಪೂಲೀಸ್ ಅಧಿಕಾರಿಗಳು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.