ಯೋಗಿ ಆದಿತ್ಯನಾಥ್, ಸಂಪುಟ ಸಹೋದ್ಯೋಗಿಗಳು, ಸಾಧು ಸಂತರೊಂದಿಗೆ ಪ್ರಯಾಗ್ ರಾಜ್ ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಅಣಿಯಾಗಿರುವ ಫೋಟೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಶಶಿ ತರೂರ್, ಗಂಗೆಯನ್ನು ಸ್ವಚ್ಛವೂ ಮಾಡಬೇಕು, ಅಲ್ಲೇ ಪಾಪವನ್ನೂ ತೊಳೆಯಬೇಕು, ನದಿಯ ಸಂಗಮದಲ್ಲಿ ಎಲ್ಲರೂ ನಗ್ನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಬಿಜೆಪಿ ಪಕ್ಷ, ಟ್ವಿಟರ್ ನಲ್ಲಿರುವ ಹಲವರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.