ದಕ್ಷಿಣ ಗರೋ ಹಿಲ್ಸ್ ನಲ್ಲಿರುವ ಮರದ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಶಿಥಿಲಗೊಂಡ ಸೇತುವೆಯನ್ನು ದುರಸ್ಥಿ ಮಾಡಿ, ಇಲ್ಲವೆ ಹೊಸದಾಗಿ ಕಾಂಕ್ರೆಟ್ ಸೇತುವೆ ನಿರ್ಮಾಣ ಮಾಡಿ ಎಂದು ಆ ಭಾಗದ ಜನ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಶಾಸಕ ಸಂಗ್ಮಾ ಅವರು ಮಾತ್ರ ಈ ಸೇತುವೆಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಅಲ್ಲದೆ ನಿರ್ಲಕ್ಷವನ್ನು ಪ್ರಶ್ನಿಸಿದ ಸ್ಥಳೀಯ ವ್ಯಕ್ತಿಯ ಮೇಲೆ ಶಾಸಕರು ಹಲ್ಲೆ ಮಾಡಿದ ಘಟನೆಯೂ ನಡೆದಿತ್ತು. ಇದೀಗ ಮಗಳ ಅಪಘಾತ ಅವರಿಗೆ ದೊಡ್ಡ ಪಾಠ ಕಲಿಸಿದೆ.