ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕಲು ರಾಜ್ಯಕ್ಕೂ ಎನ್ ಆರ್ ಸಿ ವಿಸ್ತರಿಸಿ: ತೇಜಸ್ವಿ ಸೂರ್ಯ

ಕರ್ನಾಟಕಕ್ಕೂ ಎನ್ ಆರ್ ಸಿ ವಿಸ್ತರಣೆ ಮಾಡಬೇಕೆಂದು ಸಂಸತ್ ನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ರಾಜ್ಯಕ್ಕೂ ಎನ್ ಆರ್ ಸಿ ವಿಸ್ತರಿಸಿ, ಭದ್ರತೆಗೆ ಅಪಾಯವಾಗಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕಿ: ತೇಜಸ್ವಿ ಸೂರ್ಯ
ರಾಜ್ಯಕ್ಕೂ ಎನ್ ಆರ್ ಸಿ ವಿಸ್ತರಿಸಿ, ಭದ್ರತೆಗೆ ಅಪಾಯವಾಗಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕಿ: ತೇಜಸ್ವಿ ಸೂರ್ಯ
Updated on
ನವದೆಹಲಿ: ಕರ್ನಾಟಕಕ್ಕೂ ಎನ್ ಆರ್ ಸಿ ವಿಸ್ತರಣೆ ಮಾಡಬೇಕೆಂದು ಸಂಸತ್ ನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. 
ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿರುವ ತೇಜಸ್ವಿ ಸೂರ್ಯ, ಬೆಂಗಳೂರು ನಗರ ಹಾಗೂ ಇಡೀ ರಾಜ್ಯದ ಭದ್ರತೆಗೆ ಅಕ್ರಮ ಬಾಂಗ್ಲಾ ವಲಸಿಗರಿಂದ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಎನ್ ಆರ್ ಸಿ ಯನ್ನು ಕರ್ನಾಟಕಕ್ಕೂ ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ. 
ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಪ್ರಮುಖವಾಗಿ ಬೆಂಗಳೂರು ನಗರದಲ್ಲಿದ್ದಾರೆ. ಇವರು ಭದ್ರತೆಗಷ್ಟೇ ಅಪಾಯಕಾರಿಯಲ್ಲದೇ ಸ್ಥಳೀಯರಿಂದ ಕೆಲಸ ಕಸಿದುಕೊಳ್ಳುವ ಮೂಲಕ ಆರ್ಥಿಕವಾಗಿಯೂ ಅಪಾಯಕಾರಿಯಗಿದ್ದಾರೆ ಎಂದು ತೇಜಸ್ವಿ ಸೂರ್ಯ ರಾಜ್ಯದಲ್ಲಿರುವ ಅಕ್ರಮ ವಲಸಿಗರ ಸಮಸ್ಯೆ ಬಗ್ಗೆ ಸಂಸತ್ ನ ಗಮನ ಸೆಳೆದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com