ಈ ಬೆಳವಣಿಗೆಗಳ ಕುರಿತು ಪೋಲೀಸರು ನ್ಯಾಯಾಲಯಕ್ಕೆ ವರದಿ ಮಾಡಿದಾಗ ಬಂಕ್ಷಾಲ್ ನ್ಯಾಯಾಲಯ ರಾಯ್ ಅವರಿಗೆ ಸಮನ್ಸ್ ನೀಡಿದೆ. ಆದರೆ ರಾಯ್ ನೋಟಿಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.ಜುಲೈ 8 ರಂದು ದೆಹಲಿಯಲ್ಲಿ ರಾಯ್ ಅವರನ್ನು ವಿಚಾರಣೆಗೊಳಿಸುವುದಾಗಿ ಪೊಲೀಸರು ಹೊಸ ಸಮನ್ಸ್ ಜಾರಿಗೊಳಿಸಿದರು. ಆದಾಗ್ಯೂ, ರಾಯ್ ಜುಲೈ 30 ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ದೆಹಲಿ ನಿವಾಸಕ್ಕೆ ಬರಲು ಪೊಲೀಸರನ್ನು ಕೇಳಿಕೊಂಡರು. ಇದೀಗ ನ್ಯಾಯಾಲಯ ರಾಯ್ ನೋಟೀಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿಲ್ಲ ಎಂದಲ್ಲ ಎಂಬುದಾಗಿ ಹೇಳಿ ಬಂಧನ ವಾರಂಟ್ ಜಾರಿ ಮಾಡಿದೆ.