ಬಿಜೆಪಿ ಸದಸ್ಯ ರಾಜೀವ್ ಪ್ರತಾಪ್ ರೂಡಿ ಮಾತನಾಡಿ, ವಿದ್ಯುತ್ ಪೂರೈಕೆ, ಖಾಸಗಿ ಟೆಲಿಕಾಂ ಕಂಪೆನಿಗಳಿಂದಾಗವ ಕಾಲ್;ಡ್ರಾಪ್(ಕರೆ ಕಡಿತ) ಸಮಸ್ಯೆ ಮತ್ತು ವಿಮಾನಯಾನ ಸಂಸ್ಥೆಗಳ ಸೇವೆಗಳಲ್ಲಿ ಆಗುವ ವಿಳಂಬದಿಂದ ಗ್ರಾಹಕರು ತೊಂದರೆ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ನಾಯಕ ಶಶಿ ತರೂರ್ ಮಾತನಾಡಿ, ಅನೇಕ ಕಂಪನಿಗಳಿಗೆ ಮಧ್ಯಸ್ಥಿಕೆ ಉಪವಾಕ್ಯವಿದ್ದು, ಇದಕ್ಕೆ ಅನುಮತಿಸಬಾರದು. ಕಂಪೆನಿಗಳು ಸೀಮಿತ ಹೊಣೆಗಾರಿಕೆ ಉಪವಾಕ್ಯ ಸಹ ಹೊಂದಿವೆ. ಅಂದರೆ ಗ್ರಾಹಕರನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದಿಲ್ಲ ಎಂಬುದಾಗಿದೆ ಎಂದು ಹೇಳಿದರು. ಅನೇಖ ಸದಸ್ಯರು ಮಂಡಿಸಿದ ತಿದ್ದುಪಡಿಗಳನ್ನು ಸದನ ತಿರಸ್ಕರಿಸಿತು ಮತ್ತು ಕೆಲ ಸದಸ್ಯರು ತಮ್ಮ ತಿದ್ದುಪಡಿಗಳನ್ನು ಮಂಡಿಸದಿರಲು ನಿರ್ಧರಿಸಿದರು