ನವದೆಹಲಿ: ನಾಪತ್ತೆಯಾಗಿರುವ ವಿಮಾನ ಎಎನ್ 32 ಬಗ್ಗೆ ಇನ್ನೂ ಯಾವುದೇ ಸುಳಿವು ದೊರೆತಿಲ್ಲ. .ಈ ನಡುವೆ ಐಎಎಫ್ ನಾಪತ್ತೆಯಾಗಿರುವ ವಿಮಾನದ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. .ಶಿಲ್ಲಾಂಗ್ ನಲ್ಲಿರುವ ಈಸ್ಟರ್ನ್ ಏರ್ ಕಮಾಂಡ್ ನ ಏರ್ ಮಾರ್ಷಲ್ ಆರ್ ಡಿ ಮಥೂರ್ ಈ ಘೋಷಣೆ ಮಾಡಿದ್ದಾರೆ. .ನಾಪತ್ತೆಯಾಗಿರುವ ವಿಮಾನಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ವಿಮಾನ ಪತ್ತೆಯಾಗುವಂತಹ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡಲಾಗುವುದು ಎಂದು ಮಾಥೂರ್ ಹೇಳಿದ್ದಾರೆ. .ಅರುಣಾಚಲ ಪ್ರದೇಶದಲ್ಲಿ ಸೇನಾ ಸಹಾಯವನ್ನೂ ಪಡೆದು ವಿಮಾನ ಹುಡುಕಲಾಗುತ್ತಿದೆ ಎಂದು ಐಎಎಫ್ ತಿಳಿಸಿದೆ. .Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos