ಶಾಲೆಯಲ್ಲಿ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಕೆಲವು ಮಕ್ಕಳಿಗೆ ಗಮನ ಹರಿಸಲು ಕಷ್ಟವಾಗುತ್ತದೆ. ಪರೀಕ್ಷೆಗಳಲ್ಲಿ ಓದಲು ಮಕ್ಕಳಿಗೆ ಕಷ್ಟವಾಗುತ್ತದೆ. ಗಮನ ಬೇರೆಲ್ಲೋ ಹೋಗುತ್ತದೆ. ನಿದ್ದೆ ಬರುತ್ತಿರುತ್ತದೆ. ಇವರೆಲ್ಲ ಶಾಲೆಯ ಮಕ್ಕಳು, ಆದರೆ ನಮ್ಮ ಸಂಸತ್ತಿನಲ್ಲಿ ಕೂಡ ಮಕ್ಕಳಿದ್ದಾರೆ, ಅವರಿಗೆ ರಾಷ್ಟ್ರಪತಿಗಳ ಭಾಷಣ ಕೇಳಲು ಕೂಡ ಸಾಧ್ಯವಾಗುವುದಿಲ್ಲ. ಮೊಬೈಲ್ ಫೋನ್ ನಲ್ಲಿ ಮೆಸೇಜ್ ನೋಡುತ್ತಿರುತ್ತಾರೆ, ಏನೋ ಹುಡುಕುತ್ತಿರುತ್ತಾರೆ, ಅಥವಾ ವಿಡಿಯೊ ಗೇಮ್ ಆಡುತ್ತಿರುತ್ತಾರೆ. ಇಂತಹ ಮಕ್ಕಳ ಮನೋವೃತ್ತಿಯವರನ್ನು ನಿಯಂತ್ರಿಸಬೇಕೆಂದರೆ ಯೋಗ ಸಹಕಾರಿಯಾಗಬಹುದು ಎಂದು ರಾಹುಲ್ ಗಾಂಧಿಯನ್ನು ಅವರ ಹೆಸರು ಹೇಳದೆಯೇ ಟೀಕಿಸಿದರು.